Tuesday, September 13, 2022

ಡಾ.ಪ್ರಕಾಶ ಗ.ಖಾಡೆ ; ರಂಗಭೂಮಿ ಕ್ಷೇತ್ರದ ಸಾಧನೆಗಳು:

  ಡಾ.ಪ್ರಕಾಶ ಗ.ಖಾಡೆ ;  ರಂಗಭೂಮಿ ಕ್ಷೇತ್ರದ ಸಾಧನೆಗಳು:





1)"ಬರ್ರೆಪೋ ಗಲ್ಲಿಗೇರಿಸ್ರಿ" ನಾಟಕ ರಂಗ ಸಮೂಹ ಬಾಗಲಕೋಟ ಅವರಿಂದ ಮಲ್ಲಿಕಾರ್ಜುನ ಸೊನ್ನದ ನಿರ್ದೇಶನದಲ್ಲಿ 25ಕ್ಕೂ ಹೆಚ್ಚು ಬೀದಿ ನಾಟಕವಾಗಿ ಪ್ರದರ್ಶನ 20-04-1984 ರಿಂದ

2)ಹುನಗುಂದ ತಾಲೂಕ ಸೂಳೆಭಾವಿಯಲ್ಲಿ ನಡೆದ ಹವ್ಯಾಸಿ ವೃತ್ತಿ ರಂಗೋತ್ಸವ (25-07-1990 ರಿಂದ 29-07-1990)ದಲ್ಲಿ ಕಾರ್ಯನಿರ್ವಹಣೆ.

3)"ಸ್ನೇಹರಂಗ ಸಾಧನೆ ತುಂಬಿದ ದಶಕ" ಲೇಖನ ಸುಧಾ 21-10-1990ರಲ್ಲಿ   ಪ್ರಕಟ.

4)"ನಾ ಹೆಚ್ಚೋ ನಿನ್ನ ತವರ ಹೆಚ್ಚೋ" (ಜನಪದ ಸಂಗೀತ ನಾಟಕ) ಆಕಾಶವಾಣಿ     ಧಾರವಾಡ ಕೇಂದ್ರದಿಂದ ದಿ. 11-02-1993 ರಲ್ಲಿ ಪ್ರಸಾರ.

5)ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ಸಾಂಸ್ಕøತಿಕ ವಿಭಾಗ, ನವದೆಹಲಿ ಶ್ರೀ ಮಂಜುನಾಥ ಶ್ರೀ ಕೃಷ್ಣ ಪಾರಿಜಾತ ಬಯಲು ಕಂಪನಿ, ದಾದನಟ್ಟಿ, ಸಹಯೋಗದಲ್ಲಿ ನಡೆದ "ಶ್ರೀ ಕೃಷ್ಣ ಪಾರಿಜಾತ ರಂಗ ತರಬೇತಿ ಶಿಬಿರ"ದಲ್ಲಿ ಉಪನ್ಯಾಸ. ಉತ್ತರ ಕರ್ನಾಟಕದಲ್ಲಿ ಪಾರಿಜಾತ ಕಲೆಯ ಬೆಳವಣಿಗೆ ಹಾಗೂ ಪ್ರಚಾರ 06-08-1998, ಸ್ಥಳ: ಕಡಪಟ್ಟಿ, ತಾ: ಜಮಖಂಡಿ.

6)ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಹಾಗೂ ನಟರಾಜ ಹವ್ಯಾಸಿ ಕಲಾ ತಂಡ, ಲೋಕಾಪೂರ ಸಹಯೋಗದಲ್ಲಿ ನಡೆದ "ಗ್ರಾಮೀಣ ರಂಗೋತ್ಸವ 99" ದಲ್ಲಿ ಕಾರ್ಯನಿರ್ವಹಣೆ (ಸಂಚಾಲಕತ್ವ) (25-04-1999 ರಿಂದ 27-04-1999).

7)ಅಧ್ಯಕ್ಷತೆ: ಜಾನಪದ ಸಂರಕ್ಷಣಾ ಪರಿಷತ್ ಯಂಡಿಗೇರಿ (ಬದಾಮಿ) ಸಂಸ್ಥೆಯಿಂದ ನಡೆದ ಬಯಲಾಟ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ, ಸ್ಥಳ: ಯಂಡಿಗೇರಿ, ತಾ: ಬದಾಮಿ ದಿ. 12-08-2000.

8)ರಂಗ ಕೃತಿ ಪ್ರಕಟ: "ಪಾರಿಜಾತದ ಗಾರುಡಿಗ" ಕೃಷ್ಣಾಜಿ ದೇಶಪಾಂಡೆ ಕೃತಿ ಬಿಡುಗಡೆ, ಸಂಸ್ಕøತಿ ರಂಗಮಂದಿರ ಲೋಕಾಪೂರ 14-10-1997, ಪಾರಿಜಾತ ಪ್ರತಿಷ್ಠಾನ ಲೋಕಾಪೂರ, ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಣೆ.

9)ರಂಗ ಸಂಗೀತ: ಅಧ್ಯಕ್ಷತೆ, ಕರ್ನಾಟಕ ನಾಟಕ ಅಕಾಡಮಿ, ಬೆಂಗಳುರು ವತಿಯಿಂದ ಶ್ರೀ ಮಹಾಲಿಂಗೇಶ್ವರ ಅನುಭವ ಮಂಟಪ ರನ್ನ ಬೆಳಗಲಿಯಲ್ಲಿ ನಡೆದ ರಂಗಭೂಮಿ ಕಲಾವಿದರಿಂದ ರಂಗ ಸಂಗೀತ ಮತ್ತು ಪಾರಿಜಾತ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ, ಸ್ಥಳ: ರನ್ನ ಬೆಳಗಲಿ (ಮುಧೋಳ), ದಿ. 14-02-1997.

10)ರಂಗ ಉಪನ್ಯಾಸ: ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಮತ್ತು ಶ್ರೀ ಮಂಜುನಾಥ ಪಾರಿಜಾತ ಕಂಪನಿ, ದಾದನಟ್ಟಿ, ಸಹಯೋದಲ್ಲಿ "ಶ್ರೀ ಕೃಷ್ಣ ಪಾರಿಜಾತ ರಂಗೋತ್ಸವದಲ್ಲಿ" ಉಪನ್ಯಾಸ, ಸ್ಥಳ: ಬಾಲಕಿಯರ ಸರಕಾರಿ ಪ.ಪೂ. ಕಾಲೇಜು ಜಮಖಂಡಿ ದಿನಾಂಕ 01-10-1997.

11)ಪ್ರಚಾರ ಸಮಿತಿ ಅಧ್ಯಕ್ಷ: "ಗಿರಿಜನ ಕಲಾ ಮೇಳ 98" ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಮತ್ತು ನಟರಾಜ ಹವ್ಯಾಸಿ ಕಲಾ ತಂಡ ಲೋಕಾಪುರ ವತಿಯಿಂದ ನಡೆದ "ಗಿರಿಜನ ಕಲಾ ಮೇಳ 98"ರ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ, ದಿನಾಂಕ 12-04-98.

12)ರಂಗ ಉಪನ್ಯಾಸ : ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ಸಾಂಸ್ಕøತಿಕ ವಿಭಾಗ ನವದೆಹಲಿ ಹಾಗೂ ಮಂಜುನಾಥ ಶ್ರೀ ಕೃಷ್ಣ ಪಾರಿಜಾತ ಬಯಲು ಕಂಪನಿ ದಾದನಟ್ಟಿ ಸಹಯೋಗದಲ್ಲಿ ನಡೆದ "ಶ್ರೀ ಕೃಷ್ಣ ಪಾರಿಜಾತ" ರಂಗ ತರಬೇತಿ ಶಿಬಿರದಲ್ಲಿ ಉತ್ತರ ಕರ್ನಾಟಕದಲ್ಲಿ ಪಾರಿಜಾತ ರಂಗ ಕಲೆಯ ಬೆಳವಣಿಗೆ ಹಾಗೂ ಪ್ರಚಾರ ಕುರಿತು ಉಪನ್ಯಾಸ.

13)ಗ್ರಾಮೀಣ ರಂಗೋತ್ಸವ ಸಂಚಾಲಕತ್ವ, ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ, ಬೆಂಗಳೂರು ಹಾಗು ನಟರಾಜ ಹವ್ಯಾಸಿ ಕಲಾ ತಂಡ, ಲೋಕಾಪುರ ವತಿಯಿಂದ ನಡೆದ 

"ಗ್ರಾಮೀಣ ರಂಗೋತ್ಸವ 99" ರ ಕಾರ್ಯನಿರ್ವಹಣೆ. ಸ್ಥಳ: ಲೋಕಾಪುರ ದಿ. 25-04-1999 ರಿಂದ 27-04-1999.

14)ಅಧ್ಯಕ್ಷತೆ: ಜಾನಪದ ಸಂರಕ್ಷಣಾ ಪರಿಷತ್ ಯಂಡಿಗೇರಿ (ಬಾದಾಮಿ) ಅವರಿಂದ ನಡೆದ ಬಯಲಾಟ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾತ್ಯಕ್ಷಿಕೆ ಹಾಗೂ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ, ಸ್ಥಳ: ಯಂಡಿಗೇರಿ (ಬದಾಮಿ) ದಿನಾಂಕ 12-08-2000.

15)ಕಮ್ಮಟದ ನಿರ್ದೇಶಕ: ಬಾಗಲಕೋಟ ಜಿಲ್ಲಾ ಶಿಕ್ಷಕರಿಗಾಗಿ ಕರ್ನಾಟಕ ನಾಟಕ ಅಕ್ಯಾಡಮಿ, ಡಯಟ್, ಇಲಕಲ್ಲ ಸಹಯೋಗದಲ್ಲಿ ನಡೆದ 5 ದಿನಗಳ ಮಕ್ಕಳ ನಾಟಕ ರಚನಾ ಮತ್ತು ಅಭಿನಯ ಕಮ್ಮಟದ ನಿರ್ದೇಶಕರಾಗಿ ಕಾರ್ಯ ನಿರ್ವಹಣೆ, ಸ್ಥಳ: ಬಾಗಲಕೋಟ, ದಿನಾಂಕ 16-12-2002.

16)ರಂಗ ಉಪನ್ಯಾಸ: ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬಾಗಲಕೋಟ ವತಿಯಿಂದ ಪಾರಿಜಾತ ಉತ್ಸವ ಲೋಕಾಪೂರ 2003ರಲ್ಲಿ ಲೋಕಾಪೂರ ಪಾರಿಜಾತ ಪರಂಪರೆ ಕುರಿತು ಉಪನ್ಯಾಸ.

17)"ರಂಗಕೋಟೆ ಬಾಗಲಕೋಟೆ" ತಂಡದ ಸ್ಥಾಪನೆ, ತಂಡದ ಪ್ರಧಾನ ಸಂಚಾಲಕ, ಈ ತಂಡದಿಂದ ಬಾಗಲಕೋಟೆ ನಗರದಲ್ಲಿ ದಿನಾಂಕ 25-02-2006 ರಂದು "ಮುಟ್ಟಿದರೆ ಶಿವನಾಣೆ" ನಾಟಕ ಪ್ರದರ್ಶನ, ನಾಟಕದಲ್ಲಿ ಸನ್ಯಾಸಿ ರೂಪದ ನಾರದನಾಗಿ ಅಭಿನಯ. ಸ್ಥಳ: ಜಿಲ್ಲಾ ಕಲಾಭವನ, ನವನಗರ, ಬಾಗಲಕೋಟ.

18)ದಿನಾಂಕ 15-08-2006ರಂದು ಜಿಲ್ಲಾ ಆಡಳಿತ, ಬಾಗಲಕೋಟೆಯ ವತಿಯಿಂದ ಸ್ವಾತಂತ್ರ್ಯೋತ್ಸವ ಅಂಗವಾಗಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ "ಗಾಂಧಿ ಎದುರಿನಲ್ಲಿ" ನಾಟಕ ಪ್ರದರ್ಶನ. ನಿರ್ದೇಶನ: ಡಾ. ಪ್ರಕಾಶ ಖಾಡೆ.

19)"ರಂಗಕೋಟೆ ಬಾಗಲಕೋಟೆ" ತಂಡದಿಂದ ಎರಡನೆಯ ನಾಟಕ "ಶ್ರೀ ಬೀಳೂರು ಗುರುಬಸವ ಜ್ಯೋತಿ" ನಾಟಕದಲ್ಲಿ ಘನಮಠದ ಶಿವಯೋಗಿಗಳ ಪಾತ್ರ ಅಭಿನಯಿಸಿದ್ದು. ನಾಟಕ ಪ್ರದರ್ಶನ ದಿನಾಂಕ 04-11-2007, ಸ್ಥಳ: ಜಿಲ್ಲಾ ಕಲಾಭವನ, ನವನಗರ, ಬಾಗಲಕೋಟ.

20)ಜಲಜಮಿತ್ರ ರಂಗವೇದಿಕೆ ತಂಡದಿಂದ ಬೆಂಗಳೂರು ಕುವೆಂಪು ಕಲಾಮಂದಿರದಲ್ಲಿ 26                 ಜನೆವರಿ 2010 ರಂದು ಗಣರಾಜ್ಯೋತ್ಸವ ಅಂಗವಾಗಿ ‘ರಂಗ ಸುಂದರಿ’ (ರಚನೆ,ನಿರ್ದೆಶನ :ಬಸವರಾಜ ಮಠ) ಪ್ರದರ್ಶನ, ನಾಟಕದಲ್ಲಿ ಟಿ.ವಿ.ನಿರೂಪಕನ ಪಾತ್ರ ಅಭಿನಯ. 

21)ಜಲಜಮಿತ್ರ ರಂಗವೇದಿಕೆ ತಂಡದಿಂದ ಬಾಗಲಕೋಟದ ಜಿಲ್ಲಾ ಕಲಾ ಭವನದಲ್ಲಿ ಜನೇವರಿ 2011 ರವಿವಾರ ‘ಬಿತ್ತದೆ ಬೆಳೆದ ಇಳಿಹಾಳ ಬೊಮ್ಮಯ್ಯ’ನಾಟಕ ಪ್ರದರ್ಶನ,ನಾಟಕದಲ್ಲಿ ‘ಸುಗ್ರೀವಯ್ಯ’’ ಪಾತ್ರ ಅಭಿನಯಿಸಿದ್ದು.

22)ಬೆಳಗುತಿದೆ ಬಸವ ಬ್ಯಾಂಕ ನಾಟಕ ರಚನೆ , ಪ್ರದರ್ಶನ,ಬಾಗಲಕೋಟ.16.11.2017


No comments:

Post a Comment

Shivaratri -Dr.Prakash Khade

 ಶಿವರಾತ್ರಿ ವಿಶೇಷ ಲೇಖನ   : ಜನಪದರ ಹಾಡುಗಳಲ್ಲಿ ಶಿವರಾತ್ರಿ :  -ಡಾ.ಪ್ರಕಾಶ ಗ. ಖಾಡೆ,    ಬಾಗಲಕೋಟ ಮೊ. 9845500890    ಭಾರತೀಯ ಸಂಸ್ಕøತಿಯ ಬೇರುಗಳು ನಮ್ಮ ಜನಪದರ...