Thursday, July 27, 2023

ಬಾಳುಕುನ ಪುರಾಣ -ಕಥಾ ಸಂಕಲನ

 


ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಪ್ರಕಾಶ ಗ.ಖಾಡೆ
ಪ್ರಕಾಶಕರು
ಅನಿಕೇತನ ಪ್ರಕಾಶನ, ನವನಗರ, ಬಾಗಲಕೋಟೆ
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೩

ಡಾ. ಪ್ರಕಾಶ ಗ ಖಾಡೆ ಇವರ ನೂತನ ಕಥಾ ಸಂಕಲನ ‘ಬಾಳುಕುನ ಪುರಾಣ'. ತಮ್ಮ ಕಥಾ ಸಂಕಲನದ ಕುರಿತಾಗಿ, ತಮ್ಮ ಕಥೆಗಳ ಬಗ್ಗೆ ಲೇಖಕರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ...

“ಕಾರಣಗಳಿಲ್ಲದೇ ಕಥೆ ಹುಟ್ಟಿತೇ? ಕಥೆಗಳಿಗಿರುವ ಮೋಹಕತೆ ಎಂಥದು? ಕಥೆ ಕಟ್ಟುವ ಕುಶಲತೆಯೂ ಕಲ್ಲಲ್ಲಿ ಒಂದು ಮೂರುತಿಯನ್ನು, ಕಟ್ಟಿಗೆಯಲ್ಲಿ ಒಂದು ಆಕೃತಿಯನ್ನು ರೂಪಿಸಿದಂತೆ. ಕಥೆ ಎಲ್ಲ ವಯೋಮಾನದವರಿಗೂ ಬೇಕು. ವ್ಯಕ್ತಿ ತಾನೇ ಒಂದು ಕಥೆಯಾಗುವ, ತನ್ನ ಸುತ್ತಲ ಘಟನೆಗಳೇ ಆಕಾರಗಳಾಗುವ, ತನ್ನ ಕಾಲದ ಜನರ ಮನೋಭಾವಗಳು ದಾಖಲಾಗುವ ಇಂಥ ವಿಸ್ಮಯಗಳನ್ನು ತನ್ನ ಒಡಲಲ್ಲಿ ತುಂಬಿಟ್ಟುಕೊಂಡು ಎಲ್ಲವನ್ನು ತೋಡಿ ಬಯಲಾಗುವ ಮತ್ತೇ ಹೊಸತನಕ್ಕೆ ತೆರೆದುಕೊಳ್ಳುವ ಕಥಾ ಪಯಣ ಒಂದು ಜೀವಂತಿಕೆಯ ಲಕ್ಷಣ. ನಾನು ಕಥೆ ಬರೆಯುವುದೇ ಸಾಹಿತ್ಯದ ಅದರಲ್ಲೂ ಸೃಜನಶೀಲ ಸಾಹಿತ್ಯದ ಒಂದು ಶಕ್ತಿಯೆಂದು ಭಾವಿಸಿಕೊಂಡವನು. ನಮ್ಮ ತಂದೆ ಜಿ.ಬಿ.ಖಾಡೆಯವರ ಅಪಾರ ಜಾನಪದದ ಆಸಕ್ತಿಯ ಕಾರಣವಾಗಿ ಅವರು ಕಳೆದ ಶತಮಾನದ ಅರವತ್ತರ ದಶಕದಲ್ಲಿ ಡೊಳ್ಳಿನ ಮೇಳದವರು ತಮ್ಮ ಹಾಡುಗಳ ಮೂಲಕ ಹೇಳುತ್ತಿದ್ದ ಜನಪದ ಕಥೆಗಳನ್ನು ಸಂಗ್ರಹಿಸಿ ಸಂಪಾದಿಸಿದ್ದರು. ನಾನು ಅವನ್ನು ಓದಿಕೊಂಡು ಬೆಳೆದವನು. ಮುಂದೆ ವಿದ್ಯಾರ್ಥಿದೆಸೆಯಲ್ಲಿ ಮಾಸ್ತಿ, ತೇಜಸ್ವಿ, ಲಂಕೇಶ. ದು.ನಿಂ.ಬೆಳಗಲಿ, ಸತ್ಯಕಾಮ, ರಾವಬಹದ್ದೂರ, ಬಿ.ಟಿ.ಲಲಿತಾ ನಾಯಕ, ಕುಂವೀ ಅವರ ಕಥೆಗಳನ್ನು ಓದುತ್ತಾ ಕಥಾ ಸಾಹಿತ್ಯದ ಆಸಕ್ತಿಯನ್ನು ಒಂದು ತಪಸ್ಸನ್ನಾಗಿ ಸ್ವೀಕರಿಸಿಕೊಂಡೆ.

ಮೊದಲ ಕಥೆ 'ಸೂರ್ಯ ಚಂದ್ರರು ಕಾವಲೋ' ೧೯೯೯ ರಲ್ಲಿ ಬರೆದೆ, ಅದು ಅದೇ ವರ್ಷ ಕನ್ನಡ ಪ್ರಭದಲ್ಲಿ ಪ್ರಕಟವಾಯಿತು, ಅದೇ ಖುಷಿಯಲ್ಲಿ ಬರೆದ 'ನಮ್ಮೂರ ನಮಗ ಪಾಡ' ಕಥೆ ಪ್ರಜಾವಾಣಿಯಲ್ಲಿ, 'ಭೂಮಿ ತಲ್ಲಣಿಸ್ಯಾವ' ಕಥೆ ವಿಜಯ ಕರ್ನಾಟಕದ ವಿಜಯ ನೆಕ್ಷದಲ್ಲಿ ಪ್ರಕಟವಾದಾಗ ಆದ ಖುಷಿಯೇ ಬೇರೆ. ಹೀಗೆ ಇಪ್ಪತ್ತು ವರ್ಷಗಳ ಪಯಣದಲ್ಲಿ ಬರೆದುಕೊಂಡು ಬಂದ ಕಥೆಗಳನ್ನೆಲ್ಲ ಸೇರಿಸಿ ೨೦೨೧ರಲ್ಲಿ ಹತ್ತು ಕಥೆಗಳನ್ನೊಳಗೊಂಡ 'ಚೆಲುವಿ ಚಂದ್ರಿ' ಕಥಾ ಸಂಕಲನವನ್ನು ಹೊರತಂದೆ. ಅದು ನೀಡಿದ ಸಂತಸ ಅಪಾರ, ಕಥಾ ಬರವಣಿಗೆಯನ್ನು ಒಂದು ತಪಸ್ಸಿನಂತೆ ಬರೆಯುತ್ತ ಹೋದೆ, ಈ ಎರಡು ವರ್ಷಗಳಲ್ಲಿ ಮತ್ತೆ ಎಂಟು ಕಥೆಗಳು ಹುಟ್ಟಿಕೊಂಡವು. ಅದರ ಒಂದು ಕಟ್ಟು ಈ 'ಬಾಳುಕುನ ಪುರಾಣ' ಕಥಾ ಸಂಕಲನ, ಈಗ ೨೦೨೩ರಲ್ಲಿ ಹೊರಬಂದಿದೆ. ಇಲ್ಲಿಯ ಕಥೆಗಳೂ ನಾಡಿನ ಗಣ್ಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಥಾ ಪ್ರಶಸ್ತಿಗಳನ್ನು ಪಡೆದು ಕಥೆಗಾರನಿಗೆ ಹೆಸರು ಮತ್ತು ಒಂದಿಷ್ಟು ಕೀರ್ತಿಯನ್ನೂ ಪ್ರಾಪ್ತ ಮಾಡಿವೆ. ಈ ಸಂಕಲನದ 'ಬಾಳುಕುನ ಪುರಾಣ' ಹಾಗೂ ಯಾಗದ ಕುದುರೆ ಕಥೆಗಳು ಸುಧಾದಲ್ಲೂ, 'ಇಲ್ಲಿಂದ ಮೇಲೆ ಶಬ್ದವಿಲ್ಲ' ಕಥೆ ಪ್ರಜಾವಾಣಿಯಲ್ಲೂ ಪ್ರಕಟವಾಗಿವೆ. 'ಸಧ್ಯಕಿದು ಜಮಖಂಡಿ ಸಂತಿ' ಕಥೆ ಮುಂಬಯಿಯ ಮೊಗವೀರ ಪತ್ರಿಕೆಯವರು 'ಅಕ್ಕರ ತಾಯವ್ವ' ಕಥೆಗೆ ಬೆಳಗಾವಿಯ ಕಲ್ಯಾಣರಾವ ಮುಚಳಂಬಿ ಪ್ರಶಸ್ತಿ ದೊರೆತಿದೆ. ಪ್ರತಿ ವರ್ಷ ನಡೆಸುವ ರಾಷ್ಟ್ರಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿಗೆ ಭಾಜನವಾಗಿದೆ, ಈ ಕಥೆ ಕರ್ಮವೀರ ೪ ಜೂನ ೨೦೨೩ ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಈಗ ಬಾಗಲಕೋಟೆಯಲ್ಲಿ ನೆಲೆಸಿದ್ದರೂ, ಗ್ರಾಮೀಣ ಪ್ರದೇಶದ ನನ್ನೂರು ಜಮಖಂಡಿ ತಾಲೂಕಿನ ತೊದಲಬಾಗಿ, ಇಲ್ಲಿಯ ಪರಿಸರದಲ್ಲಿಯೇ ನನ್ನ ಬಾಲ್ಯವನ್ನು ಕಳೆದೆ, ಮುಂದೆ ತಂದೆಯವರ ಕಂದಾಯ ಇಲಾಖೆಯ ವೃತ್ತಿ ಕಾರಣವಾಗಿ ಬಾದಾಮಿ ತಾಲೂಕಿನ ಕೆರೂರು, ಇಳಕಲ್ಲಿಗಳಲ್ಲಿ ಬದುಕಿನ ಪಯಣ ಮುಂದುವರೆಯಿತು, ಏಳೂರು ಸುತ್ತಿ ಏಳೂರು ಕೆರೆಯ ನೀರು ಕುಡಿದು ಅಲ್ಲಿನ ಪರಿಸರದ ಸಂದರ್ಭಗಳು, ಪಾತ್ರಗಳು ನನಗರಿವಿಲ್ಲದೇ ಇಲ್ಲಿನ ಕಥೆಗಳಲ್ಲಿ ಜೀವ ಪಡೆದಿವೆ. ಕೆರೂರಿನಲ್ಲಿ ಕಂಡ ಮೋಡಿಯಾಟದವರು ನನ್ನ 'ಬುದ್ಧ ಪ್ರಿಯೆ ಶಾಂತಿ' ಕಥೆಯಲ್ಲಿ ಬಂದರೆ, ನಮ್ಮೂರು ತೊದಲಬಾಗಿಯಲ್ಲಿ ಕಂಡ ಬಹಿರೂಪಗಾರರು 'ಬಾಳುಕುನ ಪುರಾಣ' ಕಥೆಯಲ್ಲಿ ಬರುತ್ತಾರೆ. ಬಾದಾಮಿ ಮಹಾಕೂಟದ ಬೆಟ್ಟ, ನಮ್ಮೂರು ತದಲಬಾಗಿ ಲಕ್ಕವ್ವ ದೇವಿ, ಒಂದು ಪಾತ್ರಗಳಾಗಿಯೇ ಕಥೆಗಳಲ್ಲಿ ತೂರಿಕೊಳ್ಳುತ್ತಾರೆ. ಕನ್ನಡ ಮರಾಠಿ ಭಾಷಾ ಬಾಂಧವ್ಯದ ಜಮಖಂಡಿ ಸುತ್ತಿನ ಭಾಷೆಗೆ ಪ್ರೀತಿಯ ಗಡಸುತನ, ಕಠೋರತೆಯ ಮೃದುತ್ವತನವಿದೆ. ಕೃಷ್ಣೆ, ಘಟಪ್ರಭೆಯರ ಪೆರ್ದೊರೆಯ ನಾಡು ನಮ್ಮದು, ಈ ಜೀವನದಿಗಳ ತಟಾಕದ ಭಾಷಾ ಸಮೃದ್ಧಿ ನನ್ನ ಇಲ್ಲಿನ ಕಥೆಗಳಲ್ಲಿ ಗುಡ್ಡೆಲ್ಲಾ ಹೈನಾಗುವಂತೆ ಚೆಲ್ಲುವರಿದಿದೆ. ಈ ಪರಿಸರದಲ್ಲಿ ಬದುಕಿದ್ದ ದು.ನಿಂ.ಬೆಳಗಲಿ ಅವರ ಕೃಷ್ಣಾ ತೀರದ ವಸ್ತು ಸಂಗತಿಗಳು, ಸತ್ಯಕಾಮರ ಅಮೂರ್ತ ತಂತ್ರಗಾರಿಕೆಗಳು, ರಾವಬಹಾದ್ದೂರ ಅವರ ಗ್ರಾಮೀಣ ಸಂವೇದನೆಗಳು ನಾನು ಈ ಪರಿಸರದ ಕೂಸಾಗಿರುವುದರಿಂದ ಸಹಜವಾಗಿಯೇ ಇಲ್ಲಿನ ಕಥೆಗಳೆಲ್ಲಾ ಅವರ ಮುಂದುವರಿಕೆಯಾಗಿರಬಹುದೆಂಬ ಒಂದು ಅಗೋಚರ ಕನವರಿಕೆ ನನ್ನದು, ಇದನ್ನು ಓದುಗ ದೊರೆಗಳಷ್ಟೇ ಪ್ರಮಾಣೀಕರಿಸಬೇಕು.

ಬಾಗಲಕೋಟೆ ಅದರಲ್ಲೂ ಜಮಖಂಡಿ ಸುತ್ತಿನ ಪರಿಸರದ ಘಟನೆ, ವಸ್ತು, ಸನ್ನಿವೇಶ ಮತ್ತು ಹಬ್ಬ ಆಚರಣೆ ನಂಬುಗೆ ನಡಾವಳಿ, ಸತ್ಯ, ಪ್ರಾಮಾಣಿಕತೆ, ಮಾತುಕತೆ, ಜಾತ್ರೆ ಜಾನಪದ ಎಲ್ಲವೂ ನನ್ನ ಕಥೆಗಳಲ್ಲಿ ಹೆಡೆಮುರಿದು ಬಿದ್ದಿವೆ. ಜಮಖಂಡಿ ಸುತ್ತಿನ ಭಾಷಾ ಕುಶಲತೆ ನನ್ನ ಕಥೆಗಳ ಜೀವ ದ್ರವ್ಯ. ಇಲ್ಲಿನ ಕಥೆಗಳ ಬಗ್ಗೆ ನಾನು ಮಾತನಾಡಬಾರದು, ಕಥೆಗಳೇ ಎಲ್ಲ ಹೇಳುವಾಗ ಕಥೆಗಾರನ ಕೆಲಸವೇನೂ ಇರುವುದಿಲ್ಲ. ಈಗ ನನ್ನ ಕಥೆಯಾಯ್ತು, ಮತ್ತೆ ಏನಿದ್ದರೂ ಇವೆಲ್ಲಾ ನಿಮ್ಮ ಕಥೆಗಳು, ನನ್ನ ಕಥೆಗಳೊಂದಿಗೆ ತಾವು ಸದಾ ಜೊತೆಯಾಗಿರಿ ಎಂಬ ಪ್ರೀತಿಯನ್ನಷ್ಟೇ ನಾನು ಬಯಸಬಲ್ಲೆ.” ೧೦೦  ಪುಟಗಳ ಈ ಪುಟ್ಟ ಕಥಾ ಸಂಕಲನದ ೮ ಕಥೆಗಳು ಬಹಳ ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ.

Wednesday, July 12, 2023

 ಪರಿಚಯ ಪತ್ರ


ಡಾ. ಪ್ರಕಾಶ ಗ. ಖಾಡೆ



 

ಬಾಗಲಕೋಟೆಯಲ್ಲಿ ಅಧ್ಯಾಪಕರಾಗಿರುವ ಡಾ. ಪ್ರಕಾಶ ಗ. ಖಾಡೆ ಅವರು ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ 10 ನೇ ಜೂನ 1965 ರಂದು ಜನಿಸಿದರು. ಎಂ.ಎ.,ಪಿಎಚ್.ಡಿ ಪದವೀಧರರು. ಕಾವ್ಯ, ಕಥೆ, ನಾಟಕ, ಜೀವನಚರಿತ್ರೆ, ಸಂಶೋಧನೆ, ಸಂಪಾದನೆ, ಜಾನಪದ ಹಾಗೂ ವಿಮರ್ಶೆಗಳು ಸೇರಿದಂತೆ 51 ಕೃತಿಗಳನ್ನು ರಚಿಸಿದ್ದಾರೆ. ಪ್ರೀತಿ ಬಟ್ಟಲು, ಕೃಷ್ಣಾ ತೀರದ ಜನಪದ ಒಗಟುಗಳು, ನೆಲಮೂಲ ಸಂಸ್ಕøತಿ, ಜಾನಪದ ಲೋಕ, ಜನಪದ ಕೋಗಿಲೆ ಚಲವಾದಿ ಗೌರಮ್ಮ, ಮೌನ ಓದಿನ ಬೆಡಗು, ಜಾನಪದ ಹೆಬ್ಬಾಗಿಲು, ಸಾಹಿತ್ಯ ಸಂಗತಿ, ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ, ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ. ಶಾಂತಿ ಬೀಜಗಳ ಜತನ, ಕೊರೊನಾ ಕಾಲದ ಕವಿತೆಗಳು, ಬೇಂದ್ರೆ ಕಾವ್ಯದ ದೇಸಿಯತೆ, ಬಾಗಲಕೋಟೆ ಹೋಳಿ, ಕಾವ್ಯ ನಾದದ ಧ್ಯಾನ, ಚೆಲುವಿ ಚಂದ್ರಿ, ಬಾಳುಕುನ ಪುರಾಣ ಕಥಾ ಸಂಕಲನ ಮುಂತಾದವು ಪ್ರಕಟಿತ ಕೃತಿಗಳು. ಕನ್ನಡ ಸಾಹಿತ್ಯ ಪರಿಷತ್ತಿನ ಮುದ್ದಣ ಕಾವ್ಯ ಪ್ರಶಸ್ತಿ, ಬೇಂದ್ರೆ ಸಾಹಿತ್ಯ ಪ್ರಶಸ್ತಿ, ಹುಬ್ಬಳ್ಳಿಯ ಬೊಮ್ಮಾಯಿ ಪ್ರತಿಷ್ಠಾನ ಪ್ರಶಸ್ತಿ, ಆಜೂರ ಪ್ರತಿಷ್ಠಾನ ಪ್ರಶಸ್ತಿ, ಹರಿಹರಶ್ರೀ ಸಾಹಿತ್ಯ ಪ್ರಶಸ್ತಿ, ಮುಂಬಯಿಯ ಮೊಗವೀರ ಕಥಾ ಪ್ರಶಸ್ತಿ ಹಾಗೂ ಸಂಕ್ರಮಣ ಸಾಹಿತ್ಯ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳು ಪ್ರಸಾರವಾಗಿವೆ. 25 ಜೂನ 2023 ರವಿವಾರ ಬೆಂಗಳೂರಿನಲ್ಲಿ ನಡೆದ ಮೇಘಮೈತ್ರಿ ಆರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.


ವಿಳಾಸ : ಡಾ.ಪ್ರಕಾಶ ಖಾಡೆ, ಮನೆ ನಂ. ಎಸ್. 135,

       ಸೆಕ್ಟರ್ ನಂ. 63, ನವನಗರ, ಬಾಗಲಕೋಟೆ – 587103

       ಮೊ. 9845500890


ಈ ಮೇಲ್ -  ಞhಚಿಜeಠಿಡಿಚಿಞಚಿshbgಞ@gmಚಿiಟ.ಛಿom





ಡಾ.ಪ್ರಕಾಶ ಗ.ಖಾಡೆ ಅವರ ಪ್ರಕಟಿತ ಕೃತಿಗಳು

( 1986 ರಿಂದ 2023 )


ಅ,

ನಂ.

ಕೃತಿಗಳ ಹೆಸರು

ಸಾಹಿತ್ಯದ ಪ್ರಕಾರ ಪ್ರಕಟವಾದ ವರ್ಷ

ಪ್ರಶಸ್ತಿ ಮತ್ತು ಪ್ರಕಾಶನದ ವಿವರ

1 ಗೀತ ಚಿಗಿತ ಸಂಪಾದಿತ

ಕವನ ಸಂಕಲನ 1986 ನಾಡಿನ ನೂರೈವತ್ತು ಕವಿಗಳ ಕವಿತೆಗಳ ಸಂಪಾದನಾ ಕೃತಿ, ಇಳಕಲ್ಲದಿಂದ ಪ್ರಕಟ.


2 ತೂಕದವರು ನಾಟಕ 1993 ಅನಿಕೇತ ಪ್ರಕಾಶನ, ಬಾಗಲಕೋಟೆ


3 ಪ್ರೀತಿ ಬಟ್ಟಲು ಕವನ ಸಂಕಲನ 1997 ಅನಿಕೇತ ಪ್ರಕಾಶನ, ಬಾಗಲಕೋಟೆ


4 ಸಾಲು ಹನಿಗಳು ಕವನ ಸಂಕಲನ 2004 ಅನಿಕೇತ ಪ್ರಕಾಶನ ,ಬಾಗಲಕೋಟೆ


5 ಕೃಷ್ಣಾತೀರದ ಜನಪದ ಒಗಟುಗಳು ಜಾನಪದ ಗದ್ಯ 2005 ಹುಬ್ಬಳ್ಳಿ ಬೊಮ್ಮಾಯಿ ಪ್ರತಿಷ್ಠಾನ ಪ್ರಶಸ್ತಿ

ಅನಿಕೇತ ಪ್ರಕಾಶನ, ಬಾಗಲಕೋಟೆ


6 ಜನಪದ ಕೋಗಿಲೆ ಗೌರಮ್ಮ ಚಲವಾದಿ ಜೀವನ ಚರಿತ್ರೆ 2005 ಗದಗ ತೋಂಟದಾರ್ಯ ಸಂಸ್ಥಾನಮಠದ ಲಿಂಗಾಯತ ಪುಣ್ಯ ಪುರುಷರು ಮಾಲಿಕೆಯಲ್ಲಿ ಪ್ರಕಟ.

ದ್ವಿತೀಯ ಮುದ್ರಣ -2007

ತೃತೀಯ ಮುದ್ರಣ-2023

7 ನಮ್ಮೂರ ಶಾಲೆ ನಮ್ಮೂರ ಮಕ್ಕಳು

ಲೇಖನಗಳು 2006 ಶೈಕ್ಷಣಿಕ ಚಿಂತನ ಲೇಖನಗಳು

8 "ಜಿ.ಬಿ. ಖಾಡೆಯವರ ನಕ್ಕು ನಗಿಸುವ ಹಾಸ್ಯ ಪ್ರಸಂಗಗಳು"

ಸಂಪಾದನೆ 2006 ಅನಿಕೇತ ಪ್ರಕಾಶನ, ಬಾಗಲಕೋಟೆ

9 ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ

ಸಂಶೋಧನೆ 2007 ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಪಿಎಚ್.ಡಿ. ಮಹಾ ಪ್ರಬಂಧ


10 ಬಸವ ಸಿರಿ ಪ್ರಧಾನ ಸಂಪಾದಕ 2008 ಬಾಗಲಕೋಟೆ ಬಸವೇಶ್ವರ ಬ್ಯಾಂಕಿನ ಸ್ಮರಣ ಸಂಚಿಕೆ.


11 ಕೃಷಿ ಋಷಿ ಪ್ರಧಾನಸಂಪಾದಕ 2009 ಬಾಗಲಕೋಟೆ ಡಿ.ಸಿ.ಸಿ.ಬ್ಯಾಂಕಿನಸ್ಮರಣ ಸಂಚಿಕೆ.


12 ಮುನ್ನುಡಿ ತೋರಣ ವಿಮರ್ಶೆ 2009 ಬೇರೆ ಬೇರೆ ಲೇಖಕರ ಕೃತಿಗಳಿಗೆ ಬರೆದ 23 ಮುನ್ನುಡಿಗಳು.


13 ಜತ್ತಿ ಕಾವ್ಯಾಭಿವಂದನ ಸಂಪಾದಿತ ಕವನ ಸಂಕಲನ 2009 ಉಪರಾಷ್ಟ್ರಪತಿ ಡಾ. ಬಿ. ಡಿ. ಜತ್ತಿರವರ ಕುರಿತು ನಾಡಿನ ಕವಿಗಳು ಬರೆದ ಕವಿತೆಗಳ ಸಂಕಲನ.ಪ್ರಕಾಶನ-ಬಸವಸಮಿತಿ,ಬೆಂಗಳೂರು.


14 ಸಾಹಿತ್ಯ ಸಂಗಾತಿ ಅಂಕಣ ಬರಹ ಸಂಕಲನ 2010 ಲಡಾಯಿ ಪ್ರಕಾಶನ ,ಗದಗ



15 ನೆಲಮೂಲ ಸಂಸ್ಕøತಿ ಜನಪದ ಲೇಖನಗಳು 2010 ಈ ಕೃತಿಯಲ್ಲಿ ಪ್ರಕಟವಾದ 1.‘ಭಾರತೀಯ ಗ್ರಾಮೀಣ ಕ್ರೀಡೆ ಮಲ್ಲಕಂಬ’ ಲೇಖನ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ (2022-25 ನೇ ಸಾಲಿಗೆ) ಪಠ್ಯವಾಗಿದೆ. 2. ಆಟ್ಯಾಪಟ್ಯಾ ಲೇಖನ ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯಕ್ಕೆ ಪಠ್ಯವಾಗಿದೆ. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ.


16 ಜಾನಪದ ಲೋಕ ಜನಪದ ಲೇಖನಗಳ ಸಂಪಾದನೆ 2010 ಕನ್ನಡ ಸಾಹಿತ್ಯ ಪರಿಷತ್ತು,

ಜಿಲ್ಲಾ ಘಟಕ ಬಾಗಲಕೋಟೆಯ ಪ್ರಕಟಣೆ.


17 ಆರೂಢ ಸಂಪದ ಸ್ಮರಣ ಸಂಚಿಕೆ 2010 ಮಂಟೂರು ಮಠದ ಸ್ಮರಣ ಸಂಚಿಕೆ.


18 ಕನ್ನಡ ಪತ್ರಿಕೆ ಮತ್ತು ಸಾಹಿತ್ಯ ಲೇಖನ ಸಂಕಲನ 2010 ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಸಂಕಲನ.


19 ಕೋಟಿ ಕಾರಂಜಿ ಸ್ಮರಣ ಸಂಚಿಕೆ 2011 ಸಾರ್ವಜನಿಕ ಶಿಕ್ಷಣ ಇಲಾಖೆ ,ಬಾಗಲಕೋಟೆ ಪ್ರಕಾಶನ.


20 ಹತ್ತರ ಹೊತ್ತಿಗೆ ಸ್ಮರಣ ಸಂಚಿಕೆ 2011 ಇಳಕಲ್ಲ ಚಿತ್ರಕಲಾ ಮಹಾವಿದ್ಯಾಲಯದ ಪ್ರಕಟಣೆ.


21 ಬಾಗಲಕೋಟ ಜಿಲ್ಲೆಯ 

ಜನಪದ ಹಾಡುಗಳು ಜನಪದ ಗೀತ ಸಂಕಲನ ಕನ್ನಡ ಸಾಹಿತ್ಯ ಪರಿಷತ್ತು,ಜಿಲ್ಲಾ ಘಟಕ ಬಾಗಲಕೋಟೆಯ ಪ್ರಕಟಣೆ.


22 ಶರಣ ಲೋಕ ಲೇಖನ ಸಂಕಲನ

2012 ಹಂಬಲ ಪ್ರಕಾಶನ, ಬಾಗಲಕೋಟೆ.


23 ಮೌನ ಓದಿನ ಬೆಡಗು ವಿಮರ್ಶಾ ಸಂಕಲನ 2012 ವಿವಿಧ ಕೃತಿಗಳಿಗೆ ಬರೆದ ವಿಮರ್ಶೆಗಳು.


24 ಜಾನಪದ ಹೆಬ್ಬಾಗಿಲು ಜನಪದ ಲೇಖನಗಳು

2013 ಕಿಟಕಿ ಪ್ರಕಾಶನ ,ಮೈಸೂರು


25 ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ ಪದ್ಯಗಳ ಸಂಕಲನ 

2016 ಕ.ಸಾ.ಪ. ಪುಸ್ತಕ ದತ್ತಿ ಪ್ರಶಸ್ತಿ


26

ಬೆಳಗುತಿದೆ ಬಸವ ಬ್ಯಾಂಕ

ನಾಟಕ

2017 ಬಸವೇಶ್ವರ ಬ್ಯಾಂಕ ಕುರಿತು ನಾಟಕ. ಬ್ಯಾಂಕಿನ ಶತಮಾನೋತ್ಸವ ಸಂದರ್ಭದಲ್ಲಿ ಪ್ರದರ್ಶನ.


27 ಕನ್ನಡ ದೇಸಿ ಕಾವ್ಯ ಅಧ್ಯಯನ ವಿಮರ್ಶಾ

ಸಂಕಲನ 2017 ರೂಪಾ ಪ್ರಕಾಶನ ,ಮೈಸೂರು

28 ಶಾಂತಿ ಬೀಜಗಳ ಜತನ ಕವನ ಸಂಕಲನ 2018 1. ಕ.ಸಾ.ಪ. ಮುದ್ದಣ ಕಾವ್ಯ ಪ್ರಶಸ್ತಿ

2. ಹರಿಹರಶ್ರೀ ಪ್ರಶಸ್ತಿ, ಹರಿಹರ

3.ಆಜೂರ ಪ್ರತಿಷ್ಠಾನ ಪ್ರಶಸ್ತಿ, ಹಾರೂಗೇರಿ


29 ನೂರೆಂಟು ಕವಿಗಳ 

ಕೊರೊನಾ ಕಾಲದ ಕವಿತೆಗಳು ಸಂಪಾದಿತ ಕವನ ಸಂಕಲನ 2020 ಯಾಜಿ ಪ್ರಕಾಶನ,

ಹಂಪಿ ಹೊಸಪೇಟ.


30 ಬೇಂದ್ರೆ ಕಾವ್ಯದ ದೇಸಿಯತೆ ವಿಮರ್ಶೆ ಸಂಕಲನ 2020 ಯಾಜಿ ಪ್ರಕಾಶನ, ಹಂಪಿ, ಹೊಸಪೇಟ.


31 ಬಾಗಲಕೋಟೆ ಹೋಳಿ ಲೇಖನಗಳ ಸಂಕಲನ 2021 ಅನಿಕೇತ ಪ್ರಕಾಶನ, ಬಾಗಲಕೋಟೆ

32 ಚೆಲುವಿ ಚಂದ್ರಿ ಕಥಾ ಸಂಕಲನ 2021 ಯಾಜಿ ಪ್ರಕಾಶನ , ಹಂಪಿ ಹೊಸಪೇಟ.

ಗವಿಮಠ ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ

33 ಕಾವ್ಯ ನಾದದ ಧ್ಯಾನ

ವಿಮರ್ಶಾಸಂಕಲನ 2022 ಅನಿಕೇತ ಪ್ರಕಾಶನ, ಬಾಗಲಕೋಟೆ

34 ಹಲಸಂಗಿ ಸಾಹಿತ್ಯದ ದೇಸಿಯತೆ

ವಿಮರ್ಶಾಸಂಕಲನ 2022 ಬೆರಗು ಪ್ರಕಾಶನ, ಕಡಣಿ, ಆಲಮೇಲ.

35 ಸ್ವಾತಂತ್ರ್ಯ ಹೋರಾಟದಲ್ಲಿ ಬಾದಾಮಿ

ಚರಿತ್ರೆ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

36 ಸ್ವಾತಂತ್ರ್ಯ ಹೋರಾಟದಲ್ಲಿ ಸಿಂದಗಿ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

37 ಸ್ವಾತಂತ್ರ್ಯ ಹೋರಾಟದಲ್ಲಿ ಮಸಬಿನಾಳ ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

38 ಸ್ವಾತಂತ್ರ್ಯ ಹೋರಾಟದಲ್ಲಿ ಸಾರವಾಡ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

39 ಸ್ವಾತಂತ್ರ್ಯ ಹೋರಾಟದಲ್ಲಿ ಹಲಸಂಗಿ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

40 ಸ್ವಾತಂತ್ರ್ಯ ಹೋರಾಟದಲ್ಲಿ ನರಗುಂದ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

41 ಸ್ವಾತಂತ್ರ್ಯ ಹೋರಾಟದಲ್ಲಿ ಮುಂಡರಗಿ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

42 ಸ್ವಾತಂತ್ರ್ಯ ಹೋರಾಟದಲ್ಲಿ ಹಲಗಲಿ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

43 ಸ್ವಾತಂತ್ರ್ಯ ಹೋರಾಟದಲ್ಲಿ ಬಿಸನಾಳ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

44 ಸ್ವಾತಂತ್ರ್ಯ ಹೋರಾಟzಲ್ಲಿÀ ಬಾಗಲಕೋಟೆ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

45 ಸ್ವಾತಂತ್ರ್ಯ ಹೋರಾಟದಲ್ಲಿ ಸುರಪುರ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

46 ಸ್ವಾತಂತ್ರ್ಯ ಹೋರಾಟದಲ್ಲಿ ಕೆಂಭಾವಿ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

47 ಸ್ವಾತಂತ್ರ್ಯಹೋರಾಟದಲ್ಲಿ ರಾಜನಕೋಳೂರ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

48 ಸ್ವಾತಂತ್ರ್ಯ ಹೋರಾಟದಲ್ಲಿ ಭಾಲ್ಕಿ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

49 ಸ್ವಾತಂತ್ರ್ಯ ಹೋರಾಟದಲ್ಲಿ ಗೋರಟಾ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

50 ‘ಅಪ್ಪಾಸಾಹೇಬ’ ಅಭಿನಂದನಾ ಗ್ರಂಥ

ಪ್ರಧಾನ ಸಂಪಾದಕ 2023 ಎ.ಎಸ್.ಬಳಗಾನೂರ ಅಭಿನಂದನ ಸಮಿತಿ.

51 ಬಾಳುಕುನ ಪುರಾಣ

ಕಥಾ ಸಂಕಲನ 2023 ಅನಿಕೇತ ಪ್ರಕಾಶನ, ಬಾಗಲಕೋಟೆ



ಡಾ.ಪ್ರಕಾಶ ಗ.ಖಾಡೆ , ಮನೆ ನಂ. ಎಸ್.135, ಸೆಕ್ಟರ್ ನಂ. 63, ನವನಗರ, ಬಾಗಲಕೋಟೆ.-587103, ಮೊ.9845500890






ಡಾ.ಪ್ರಕಾಶ ಗ.ಖಾಡೆ ಅವರ ಪ್ರಬಂಧ ಮಂಡನೆ, ಕವಿಗೋಷ್ಠಿ ಮತ್ತು ಅಧ್ಯಕ್ಷತೆ


1)ಕನ್ನಡ ಸಾಹಿತ್ಯ ಮತ್ತು ಪತ್ರಿಕೆ, ಪ್ರಬಂಧ ಮಂಡನೆ

      ವಿಜಾಪೂರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಇಂಡಿ, 1991


2)"ಕನ್ನಡದಲ್ಲಿ ಚುಟುಕು ಸಾಹಿತ್ಯ ಒಂದು ಅವಲೋಕನ"

  ಚುಟುಕು ಸಾಹಿತ್ಯ ಸಮ್ಮೇಳನ ಮುದ್ದೇಬಿಹಾಳ 1998


3)"ಮಕ್ಕಳ ಸಾಹಿತ್ಯ ಮತ್ತು ಕನ್ನಡ ಪತ್ರಿಕೆ"

ಮಕ್ಕಳ ಸಾಹಿತ್ಯ ರಚನಾ ಶಿಬಿರ, ಬಾಗಲಕೋಟ 1998.


4)"ಕನ್ನಡ ಸಾಹಿತ್ಯ ಮತ್ತು ಭಾವೈಕ್ಯತೆ" ಬಿ.ವಿ.ವ. ಸಂಸ್ಥೆ ಶತಮಾನೋತ್ಸವ

  ಉಪನ್ಯಾಸ ಮಹಿಳಾ ಕಾಲೇಜು, ಬಾಗಲಕೋಟ 2006.


5)"ಸದ್ಭಾವನಾ ಕವಿಗೋಷ್ಠಿ" ಇಂಡಿ ಅಧ್ಯಕ್ಷತೆ 1997


6)"ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿ" ಗ್ರಾಮೀಣ ಸಾಹಿತ್ಯ ವೇದಿಕೆ ಶಿರೂರ 2006



7)"ಕೋಮುವಾದ ನಿವಾರಣೆ ಮತ್ತು ಸಾಹಿತ್ಯ" ಗುಳೇದಗುಡ್ಡ ಕ.ಪು.ಪ. 2006


8)"ಚುಟುಕು ಕಾವ್ಯಗೋಷ್ಠಿ" ಹುನಗುಂದ ಅಧ್ಯಕ್ಷತೆ 2006.


9)"ರಾಷ್ಟ್ರೀಯ ವಿಚಾರ ಸಂಕಿರಣ" ಕಾಸರಗೋಡು (ಕೇರಳ) ಉಪನ್ಯಾಸ, 2006


10)"ಬಾಗಿಲುಕೋಟೆ ಹೋಳಿ ಉತ್ಸವ" 

   ಉದ್ಘಾಟನಾ ಸಮಾರಂಭದಲ್ಲಿ ವಲ್ಲಭಭಾಯಿ ಚೌಕದಲ್ಲಿ ಉಪನ್ಯಾಸ 21-03-2008.


11)ಹಂಪಿ ಕನ್ನಡ ವಿ.ವಿ. ವಾಲ್ಮೀಕಿ ಅಧ್ಯಯನ ಪೀಠ, 

   ಹಲಗಲಿ ಬಂಡಾಯ ಮತ್ತು ಸಾಂಸ್ಕøತಿಕ ಅನನ್ಯತೆ" 

   ವಿಚಾರ ಸಂಕಿರಣದಲ್ಲಿ "ಸಿಂಧೂರ ಲಕ್ಷ್ಮಣ ಮತ್ತು ಜಾನಪದ" 

   ಕುರಿತು ಉಪನ್ಯಾಸ 18-02-2008 (ನಾಗರಾಳ, ಬೀಳಗಿ ತಾಲೂಕ)


12)ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ, ಕೂಡಲಸಂಗಮ, ಹಂಪಿ ವಿ.ವಿ.  ಸಹಯೋಗದಲ್ಲಿ "ವಚನ ಸಾಹಿತ್ಯ; ಅನನ್ಯತೆ" ವಿಚಾರ ಸಂಕಿರಣದಲ್ಲಿ ವಿಶೇಷ ಆಮಂತ್ರಿತ.


13) ಕರ್ನಾಟಕ ಸರಕಾರ ಪ್ರಾಚ್ಯವಸ್ತು ಸಂಶೋಧನಾ ಇಲಾಖೆ ವತಿಯಿಂದ 

  ಬಾಗಲಕೋಟ ಜಿಲ್ಲಾ ಪಂಚಾಯತ ಸಭಾಭವನದಲ್ಲಿ

  ‘ಬಾಗಲಕೋಟ ಜಿಲ್ಲೆಯ ಜಾನಪದ’ ಕುರಿತು ಉಪನ್ಯಾಸ ಡಿಸೆಂಬರ 2010

14) ಬೆಂಗಳೂರಿನಲ್ಲಿ ನಡೆದ ಮೇಘಮೈತ್ರಿ 6 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ 29.6.2023





ಡಾ.ಪ್ರಕಾಶ ಗ.ಖಾಡೆ ಅವರ ಕಾರ್ಯ ನಿರ್ವಹಣೆ


1) ಅಧ್ಯಕ್ಷ ರಾಮದುರ್ಗ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು, 1992 ರಿಂದ 1995ರವರೆಗೆ.


2) ಸದಸ್ಯ ಕನ್ನಡ ಜಾಗೃತಿ ಸಮಿತಿ (ಕನ್ನಡ ಅಭಿವೃದ್ಧಿ ಪ್ರಾಧಿಕಾರ)

         ಬಾಗಲಕೋಟ 1997 ರಿಂದ 2002.


3) ಪ್ರಧಾನ ಕಾರ್ಯದರ್ಶಿ, "ಜಾನಪದ ಉಳಿಸಿ ವೇದಿಕೆ" ಲೋಕಾಪೂರ 1997 ರಿಂದ...


4) ಪ್ರಧಾನ ಕಾರ್ಯದರ್ಶಿ "ಪಾರಿಜಾತ ಪ್ರತಿಷ್ಠಾನ" ಲೋಕಾಪೂರ 1997 ರಿಂದ....


5) ಸಂಘಟನಾ ಕಾರ್ಯದರ್ಶಿ, ಬಾಗಲಕೋಟ ಜಿಲ್ಲಾ ಚು.ಸಾ.ಪ. 1998 ರಿಂದ 2005


6) ಪ್ರಧಾನ ಸಂಚಾಲಕ, ಬಾಗಲಕೋಟ ಜಿಲ್ಲಾ ಚು.ಸಾ.ಪ. 2006 ರಿಂದ....


7) ಅಧ್ಯಕ್ಷ, ಸೃಷ್ಠಿ ಸೃಜನ ವೇದಿಕೆ, ಬಾಗಲಕೋಟ 1997 ರಿಂದ.....


8) ಅಧ್ಯಕ್ಷ, ಶರಣ ಚೇತನ, ವೇದಿಕೆ, ಬಾಗಲಕೊಟ 2005 ರಿಂದ....


9) ಪ್ರಧಾನ ಸಂಚಾಲಕ, "ರಂಗಕೋಟೆ ಬಾಗಿಲುಕೋಟೆ" 2006 ರಿಂದ....

.

10) ಕಾರ್ಯದರ್ಶಿ, ತಾ. ಕನ್ನಡ ಸಾಹಿತ್ಯ ಪರಿಷತ್ತು, ಬಾಗಲಕೊಟ 2006 ರಿಂದ 2007


11)     ಗೌರವ ಕಾರ್ಯದರ್ಶಿ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ಬಾಗಲಕೋಟ 2008-2011


12)     ಸಂಚಾಲಕರು,ಸಂಶೋಧನಾ ಸಾಹಿತಿಗಳ ಒಕ್ಕೂಟ,ಬಾಗಲಕೋಟ


13)     ಜಿಲ್ಲಾ ಅಧ್ಯಕ್ಷ,ಕನ್ನಡ ಜಾನಪದ ಪರಿಷತ್ತು,ಬಾಗಲಕೋಟ

14)    ಸದಸ್ಯರು,ಪಿ.ಬಿ.ದುತ್ತರಗಿ ಪ್ರತಿಷ್ಠಾನ, ಕರ್ನಾಟಕ ಸರಕಾರ, ಬಾಗಲಕೋಟ





ಡಾ.ಪ್ರಕಾಶ ಗ.ಖಾಡೆ ಅವರ ರಂಗಭೂಮಿ ಕ್ಷೇತ್ರದ ಸಾಧನೆಗಳು


1) "ಬರ್ರೆಪೋ ಗಲ್ಲಿಗೇರಿಸ್ರಿ" ನಾಟಕ ರಂಗ ಸಮೂಹ ಬಾಗಲಕೋಟ ಅವರಿಂದ ಮಲ್ಲಿಕಾರ್ಜುನ ಸೊನ್ನದ ನಿರ್ದೇಶನದಲ್ಲಿ 25ಕ್ಕೂ ಹೆಚ್ಚು ಬೀದಿ ನಾಟಕವಾಗಿ ಪ್ರದರ್ಶನ 20-04-1984 ರಿಂದ

2) ಹುನಗುಂದ ತಾಲೂಕ ಸೂಳೆಭಾವಿಯಲ್ಲಿ ನಡೆದ ಹವ್ಯಾಸಿ ವೃತ್ತಿ ರಂಗೋತ್ಸವ (25-07-1990 ರಿಂದ 29-07-1990)ದಲ್ಲಿ ಕಾರ್ಯನಿರ್ವಹಣೆ.

3)"ಸ್ನೇಹರಂಗ ಸಾಧನೆ ತುಂಬಿದ ದಶಕ" ಲೇಖನ ಸುಧಾ 21-10-1990ರಲ್ಲಿ   ಪ್ರಕಟ.

4)"ನಾ ಹೆಚ್ಚೋ ನಿನ್ನ ತವರ ಹೆಚ್ಚೋ" (ಜನಪದ ಸಂಗೀತ ನಾಟಕ) ಆಕಾಶವಾಣಿ     ಧಾರವಾಡ ಕೇಂದ್ರದಿಂದ ದಿ. 11-02-1993 ರಲ್ಲಿ ಪ್ರಸಾರ.

5) ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ಸಾಂಸ್ಕøತಿಕ ವಿಭಾಗ, ನವದೆಹಲಿ ಶ್ರೀ ಮಂಜುನಾಥ ಶ್ರೀ ಕೃಷ್ಣ ಪಾರಿಜಾತ ಬಯಲು ಕಂಪನಿ, ದಾದನಟ್ಟಿ, ಸಹಯೋಗದಲ್ಲಿ ನಡೆದ "ಶ್ರೀ ಕೃಷ್ಣ ಪಾರಿಜಾತ ರಂಗ ತರಬೇತಿ ಶಿಬಿರ"ದಲ್ಲಿ ಉಪನ್ಯಾಸ. ಉತ್ತರ ಕರ್ನಾಟಕದಲ್ಲಿ ಪಾರಿಜಾತ ಕಲೆಯ ಬೆಳವಣಿಗೆ ಹಾಗೂ ಪ್ರಚಾರ 06-08-1998, ಸ್ಥಳ: ಕಡಪಟ್ಟಿ, ತಾ: ಜಮಖಂಡಿ.

6) ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಹಾಗೂ ನಟರಾಜ ಹವ್ಯಾಸಿ ಕಲಾ ತಂಡ, ಲೋಕಾಪೂರ ಸಹಯೋಗದಲ್ಲಿ ನಡೆದ "ಗ್ರಾಮೀಣ ರಂಗೋತ್ಸವ 99" ದಲ್ಲಿ ಕಾರ್ಯನಿರ್ವಹಣೆ (ಸಂಚಾಲಕತ್ವ) (25-04-1999 ರಿಂದ 27-04-1999).

7) ಅಧ್ಯಕ್ಷತೆ: ಜಾನಪದ ಸಂರಕ್ಷಣಾ ಪರಿಷತ್ ಯಂಡಿಗೇರಿ (ಬದಾಮಿ) ಸಂಸ್ಥೆಯಿಂದ ನಡೆದ ಬಯಲಾಟ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ, ಸ್ಥಳ: ಯಂಡಿಗೇರಿ, ತಾ: ಬದಾಮಿ ದಿ. 12-08-2000.

8) ರಂಗ ಕೃತಿ ಪ್ರಕಟ: "ಪಾರಿಜಾತದ ಗಾರುಡಿಗ" ಕೃಷ್ಣಾಜಿ ದೇಶಪಾಂಡೆ ಕೃತಿ ಬಿಡುಗಡೆ, ಸಂಸ್ಕøತಿ ರಂಗಮಂದಿರ ಲೋಕಾಪೂರ 14-10-1997, ಪಾರಿಜಾತ ಪ್ರತಿಷ್ಠಾನ ಲೋಕಾಪೂರ, ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಣೆ.

9) ರಂಗ ಸಂಗೀತ: ಅಧ್ಯಕ್ಷತೆ, ಕರ್ನಾಟಕ ನಾಟಕ ಅಕಾಡಮಿ, ಬೆಂಗಳುರು ವತಿಯಿಂದ ಶ್ರೀ ಮಹಾಲಿಂಗೇಶ್ವರ ಅನುಭವ ಮಂಟಪ ರನ್ನ ಬೆಳಗಲಿಯಲ್ಲಿ ನಡೆದ ರಂಗಭೂಮಿ ಕಲಾವಿದರಿಂದ ರಂಗ ಸಂಗೀತ ಮತ್ತು ಪಾರಿಜಾತ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ, ಸ್ಥಳ: ರನ್ನ ಬೆಳಗಲಿ (ಮುಧೋಳ), ದಿ. 14-02-1997.

10) ರಂಗ ಉಪನ್ಯಾಸ: ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಮತ್ತು ಶ್ರೀ ಮಂಜುನಾಥ ಪಾರಿಜಾತ ಕಂಪನಿ, ದಾದನಟ್ಟಿ, ಸಹಯೋದಲ್ಲಿ "ಶ್ರೀ ಕೃಷ್ಣ ಪಾರಿಜಾತ ರಂಗೋತ್ಸವದಲ್ಲಿ" ಉಪನ್ಯಾಸ, ಸ್ಥಳ: ಬಾಲಕಿಯರ ಸರಕಾರಿ ಪ.ಪೂ. ಕಾಲೇಜು ಜಮಖಂಡಿ ದಿನಾಂಕ 01-10-1997.

11) ಪ್ರಚಾರ ಸಮಿತಿ ಅಧ್ಯಕ್ಷ: "ಗಿರಿಜನ ಕಲಾ ಮೇಳ 98" ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಮತ್ತು ನಟರಾಜ ಹವ್ಯಾಸಿ ಕಲಾ ತಂಡ ಲೋಕಾಪುರ ವತಿಯಿಂದ ನಡೆದ "ಗಿರಿಜನ ಕಲಾ ಮೇಳ 98"ರ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ, ದಿನಾಂಕ 12-04-98.

12) ರಂಗ ಉಪನ್ಯಾಸ : ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ಸಾಂಸ್ಕøತಿಕ ವಿಭಾಗ ನವದೆಹಲಿ ಹಾಗೂ ಮಂಜುನಾಥ ಶ್ರೀ ಕೃಷ್ಣ ಪಾರಿಜಾತ ಬಯಲು ಕಂಪನಿ ದಾದನಟ್ಟಿ ಸಹಯೋಗದಲ್ಲಿ ನಡೆದ "ಶ್ರೀ ಕೃಷ್ಣ ಪಾರಿಜಾತ" ರಂಗ ತರಬೇತಿ ಶಿಬಿರದಲ್ಲಿ ಉತ್ತರ ಕರ್ನಾಟಕದಲ್ಲಿ ಪಾರಿಜಾತ ರಂಗ ಕಲೆಯ ಬೆಳವಣಿಗೆ ಹಾಗೂ ಪ್ರಚಾರ ಕುರಿತು ಉಪನ್ಯಾಸ.

13) ಗ್ರಾಮೀಣ ರಂಗೋತ್ಸವ ಸಂಚಾಲಕತ್ವ, ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ, ಬೆಂಗಳೂರು ಹಾಗು ನಟರಾಜ ಹವ್ಯಾಸಿ ಕಲಾ ತಂಡ, ಲೋಕಾಪುರ ವತಿಯಿಂದ ನಡೆದ 

"ಗ್ರಾಮೀಣ ರಂಗೋತ್ಸವ 99" ರ ಕಾರ್ಯನಿರ್ವಹಣೆ. ಸ್ಥಳ: ಲೋಕಾಪುರ ದಿ. 25-04-1999 ರಿಂದ 27-04-1999.

14) ಅಧ್ಯಕ್ಷತೆ: ಜಾನಪದ ಸಂರಕ್ಷಣಾ ಪರಿಷತ್ ಯಂಡಿಗೇರಿ (ಬಾದಾಮಿ) ಅವರಿಂದ ನಡೆದ ಬಯಲಾಟ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾತ್ಯಕ್ಷಿಕೆ ಹಾಗೂ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ, ಸ್ಥಳ: ಯಂಡಿಗೇರಿ (ಬದಾಮಿ) ದಿನಾಂಕ 12-08-2000.

15) ಕಮ್ಮಟದ ನಿರ್ದೇಶಕ: ಬಾಗಲಕೋಟ ಜಿಲ್ಲಾ ಶಿಕ್ಷಕರಿಗಾಗಿ ಕರ್ನಾಟಕ ನಾಟಕ ಅಕ್ಯಾಡಮಿ, ಡಯಟ್, ಇಲಕಲ್ಲ ಸಹಯೋಗದಲ್ಲಿ ನಡೆದ 5 ದಿನಗಳ ಮಕ್ಕಳ ನಾಟಕ ರಚನಾ ಮತ್ತು ಅಭಿನಯ ಕಮ್ಮಟದ ನಿರ್ದೇಶಕರಾಗಿ ಕಾರ್ಯ ನಿರ್ವಹಣೆ, ಸ್ಥಳ: ಬಾಗಲಕೋಟ, ದಿನಾಂಕ 16-12-2002.

16) ರಂಗ ಉಪನ್ಯಾಸ: ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬಾಗಲಕೋಟ ವತಿಯಿಂದ ಪಾರಿಜಾತ ಉತ್ಸವ ಲೋಕಾಪೂರ 2003ರಲ್ಲಿ ಲೋಕಾಪೂರ ಪಾರಿಜಾತ ಪರಂಪರೆ ಕುರಿತು ಉಪನ್ಯಾಸ.


17) "ರಂಗಕೋಟೆ ಬಾಗಲಕೋಟೆ" ತಂಡದ ಸ್ಥಾಪನೆ, ತಂಡದ ಪ್ರಧಾನ ಸಂಚಾಲಕ, ಈ ತಂಡದಿಂದ ಬಾಗಲಕೋಟೆ ನಗರದಲ್ಲಿ ದಿನಾಂಕ 25-02-2006 ರಂದು "ಮುಟ್ಟಿದರೆ ಶಿವನಾಣೆ" ನಾಟಕ ಪ್ರದರ್ಶನ, ನಾಟಕದಲ್ಲಿ ಸನ್ಯಾಸಿ ರೂಪದ ನಾರದನಾಗಿ ಅಭಿನಯ. ಸ್ಥಳ: ಜಿಲ್ಲಾ ಕಲಾಭವನ, ನವನಗರ, ಬಾಗಲಕೋಟ.

18) ದಿನಾಂಕ 15-08-2006ರಂದು ಜಿಲ್ಲಾ ಆಡಳಿತ, ಬಾಗಲಕೋಟೆಯ ವತಿಯಿಂದ ಸ್ವಾತಂತ್ರ್ಯೋತ್ಸವ ಅಂಗವಾಗಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ "ಗಾಂಧಿ ಎದುರಿನಲ್ಲಿ" ನಾಟಕ ಪ್ರದರ್ಶನ. ನಿರ್ದೇಶನ: ಡಾ. ಪ್ರಕಾಶ ಖಾಡೆ.

19) "ರಂಗಕೋಟೆ ಬಾಗಲಕೋಟೆ" ತಂಡದಿಂದ ಎರಡನೆಯ ನಾಟಕ "ಶ್ರೀ ಬೀಳೂರು ಗುರುಬಸವ ಜ್ಯೋತಿ" ನಾಟಕದಲ್ಲಿ ಘನಮಠದ ಶಿವಯೋಗಿಗಳ ಪಾತ್ರ ಅಭಿನಯಿಸಿದ್ದು. ನಾಟಕ ಪ್ರದರ್ಶನ ದಿನಾಂಕ 04-11-2007, ಸ್ಥಳ: ಜಿಲ್ಲಾ ಕಲಾಭವನ, ನವನಗರ, ಬಾಗಲಕೋಟ.

20)ಜಲಜಮಿತ್ರ ರಂಗವೇದಿಕೆ ತಂಡದಿಂದ ಬೆಂಗಳೂರು ಕುವೆಂಪು ಕಲಾಮಂದಿರದಲ್ಲಿ 26                 ಜನೆವರಿ 2010 ರಂದು ಗಣರಾಜ್ಯೋತ್ಸವ ಅಂಗವಾಗಿ ‘ರಂಗ ಸುಂದರಿ’ (ರಚನೆ,ನಿರ್ದೆಶನ :ಬಸವರಾಜ ಮಠ) ಪ್ರದರ್ಶನ, ನಾಟಕದಲ್ಲಿ ಟಿ.ವಿ.ನಿರೂಪಕನ ಪಾತ್ರ ಅಭಿನಯ. 

21)ಜಲಜಮಿತ್ರ ರಂಗವೇದಿಕೆ ತಂಡದಿಂದ ಬಾಗಲಕೋಟದ ಜಿಲ್ಲಾ ಕಲಾ ಭವನದಲ್ಲಿ ಜನೇವರಿ 2011 ರವಿವಾರ ‘ಬಿತ್ತದೆ ಬೆಳೆದ ಇಳಿಹಾಳ ಬೊಮ್ಮಯ್ಯ’ನಾಟಕ ಪ್ರದರ್ಶನ,ನಾಟಕದಲ್ಲಿ ‘ಸುಗ್ರೀವಯ್ಯ’’ ಪಾತ್ರ ಅಭಿನಯಿಸಿದ್ದು.


22)ಬೆಳಗುತಿದೆ ಬಸವ ಬ್ಯಾಂಕ ನಾಟಕ ರಚನೆ ಮತ್ತು ಪ್ರದರ್ಶನ,ಬಾಗಲಕೋಟ.16.11.2017






ಡಾ.ಪ್ರಕಾಶ ಗ.ಖಾಡೆ ಅವರಿಂದ ಕವನಗಳ ವಾಚನ :



1)ಅಖಿಲ ಭಾರತ 64ನೇ ಕನ್ನಡ ಸಾಹಿತ್ಯ ಸಮ್ಮೇಳನ, ಮುಧೋಳ 1995


2)ರಾಜ್ಯ ಮಟ್ಟದ ಯುವ ಕವಿಗೋಷ್ಠಿ, ಕರ್ನಾಟಕ ಸಾಹಿತ್ಯ ಅಕ್ಯಾಡಮಿಯಿಂದ 

ಧಾರವಾಡದಲ್ಲಿ 1989


3)ರಾಜ್ಯ ಮಟ್ಟದ ಯುವ ಕವಿಗೋಷ್ಠಿ, ಮೈಸೂರು 1990. ಮೈಸೂರು ವಿ.ವಿ. 

ಕನ್ನಡ ಅಧ್ಯಯನ ಸಂಸ್ಥೆಯಿಂದ


4)ನವರಸಪುರ ಕವಿಗೋಷ್ಠಿ 1997 ಜಿಲ್ಲಾ ಆಡಳಿತ, ವಿಜಾಪೂರ


5)"ಕಿತ್ತೂರ ಉತ್ಸವ" ಕವಿಗೋಷ್ಠಿ 1997 ಜಿಲ್ಲಾ ಆಡಳಿತ, ಬೆಳಗಾವಿ


6)ಕೇರಳ ರಾಜ್ಯ ದ್ವಿತೀಯ ಕನ್ನಡ ಸಮ್ಮೇಳನ, ರಾಷ್ಟ್ರೀಯ ಕವಿಗೋಷ್ಠಿ ಕಾಸರಗೋಡು 2006


7) ಅಖಿಲ ಭಾರತ 73ನೇ ಕನ್ನಡ ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ, ಶಿವಮೊಗ್ಗ 2006


8)ಚಾಲುಕ್ಯ ಉತ್ಸವ ಕವಿಗೋಷ್ಠಿ 17-01-2008.


9)ಮೈಸೂರು ದಸರಾ ಕವಿಗೋಷ್ಠಿ -ಅಕ್ಟೋಬರ 2009


10)ಅಧ್ಯಕ್ಷತೆ.ಬಾಗಲಕೋಟ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ,ಕವಿಗೋಷ್ಟಿ,ತುಳಸಿಗೇರಿ


11) ಅಖಿಲ ಭಾರತ 73ನೇ ಕನ್ನಡ ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ, ಮೈಸೂರು 2017


12) ಮೈಸೂರು ದಸರಾ ಕವಿಗೊಷ್ಠಿ


13) ಹಂಪಿ ಉತ್ಸವ ಕವಿಗೋಷ್ಠಿ





ಡಾ.ಪ್ರಕಾಶ ಗ.ಖಾಡೆ ಪ್ರಕಟಿತ ಕಥೆಗಳ ಪಟ್ಟಿ




1.ಚೆಲುವಿ ಚಂದ್ರಿ.


2.ಇದೊಳ್ಳೆ ಪಂಚಾಯ್ತಿ ಆಯ್ತಲ್ಲಾ. (ಕರ್ಮವೀರದಲ್ಲಿ ಪ್ರಕಟ )


3. ಅಕ್ಷರ ಬೀಜ ( ವಿಕ್ರಮದಲ್ಲಿ ಪ್ರಕಟ )


4. ಮುತ್ಯಾನ ಜಾತ್ರಿ ( ವಿಶ್ವವಾಣಿಯಲ್ಲಿ ಪ್ರಕಟ )


5.  ಭೂಮಿ ತಲ್ಲಣಿಸ್ಯಾವ ( ವಿಜಯ ಕರ್ನಾಟಕದಲ್ಲಿ ಪ್ರಕಟ )


6. ಕತ್ತಲಾ ಕಾಡಿತು. ( ಕರ್ಮವೀರದಲ್ಲಿ ಪ್ರಕಟ )


7. ಅಕ್ಕಿಕಾಳು . ( ಮಯೂರದಲ್ಲಿ ಪ್ರಕಟ )


8. ಖಾಕಿ ಕಾವಲು ( ಸಮಾಜಮುಖಿಯಲ್ಲಿ ಪ್ರಕಟ )


9. ನಮ್ಮೂರ ನಮಗ ಪಾಡ ( ಪ್ರಜಾವಾಣಿಯಲ್ಲಿ ಪ್ರಕಟ )


10. ಸೂರ್ಯ ಚಂದ್ರರು ಕಾವಲೋ ( ಕನ್ನಡಪ್ರಭದಲ್ಲಿ ಪ್ರಕಟ )


11. ಬಾಳುಕುನ ಪುರಾಣ ( ಸುಧಾದಲ್ಲಿ ಪ್ರಕಟ )


12. ಸಾಲಿ ಝೇಂಡಾ


13. ಅಕ್ಕರದ ತಾಯವ್ವಾ (ಬಹುಮಾನಿತ ಕಥೆ ,ಕರ್ಮವೀರದಲ್ಲಿ ಪ್ರಕಟ )


14. ಇಲ್ಲಿಂದ ಮೇಲೆ ಶಬ್ದಗಳಿಲ್ಲ. (ಪ್ರಜಾವಾಣಿಯಲ್ಲಿ ಪ್ರಕಟ )


15. ಸಾಲಿ ಸವಾರಿ (ವಿಜಯ ಕರ್ನಾಟಕದಲ್ಲಿ ಪ್ರಕಟ )


16. ಯಾಗದ ಕುದುರೆ ( ಸುಧಾದಲ್ಲಿ ಪ್ರಕಟ )


17. ಬುದ್ದ ಪ್ರಿಯೆ ಶಾಂತಿ


18. ಸಧ್ಯಕಿದು ಜಮಖಂಡಿ ಸಂತಿ (ಬಹುಮಾನಿತ ಕಥೆ – ಮೋಗವೀರದಲ್ಲಿ ಪ್ರಕಟ )


19. ಮುಳುಗದಿರಲಿ ಬದುಕು (ತರಂಗದಲ್ಲಿ ಪ್ರಕಟ)


20. ಒಪ್ಪಾರಿ ಮೀಸೆ


ಪ್ರಕಟಿತ ಕಥಾ ಸಂಕಲನಗಳು


1. ಚೆಲುವಿ ಚಂದ್ರಿ ( 2021 )


2. ಬಾಳುಕುನ ಪುರಾಣ (2023)







        ಡಾ.ಪ್ರಕಾಶ ಗ.ಖಾಡೆ ಅವರಿಗೆ ಸಂದ ಪ್ರಶಸ್ತಿ, ಪುರಸ್ಕಾರಗಳು.


1) ಉತ್ತರ ಕರ್ನಾಟಕ ಯುವ ಲೇಖಕರ ವೇದಿಕೆ 

 "ಶ್ರೇಷ್ಠ ಸಾಹಿತಿ" ಪುರಸ್ಕಾರ 1997.


2) "ನಸುಕಿನ ಚಿತ್ರಗಳು" 

    ಕವಿತೆಗೆ ಸಂಕ್ರಮಣ ಸಾಹಿತ್ಯ ಪ್ರಶಸ್ತಿ 1989


3) "ಸಾಹಿತ್ಯ ಮತ್ತು ಸಾಮಾಜಿಕ ಬದಲಾವಣೆ" ಪ್ರಬಂಧಕ್ಕೆ 

    ರಾಜ್ಯ ಬಂಡಾಯ ಸಾಹಿತ್ಯ  ಸಂಘಟನೆಯ ಪ್ರಥಮ ಬಹುಮಾನ 1990.


4) ‘ಪ್ರೀತಿ ಬಟ್ಟಲು" ಕವನ ಸಂಕಲನಕ್ಕೆ ಕಡಣಿ ಸಾಹಿತ್ಯ ಪ್ರಶಸ್ತಿ, ಸಿಂದಗಿ 1998.


5) "ಕೃಷ್ಣಾ ತೀರದ ಜನಪದ ಒಗಟುಗಳು" ಕೃತಿಗೆ 

     ಹುಬ್ಬಳ್ಳಿಯ ಗೌರಮ್ಮ ಬೊಮ್ಮಾಯಿ  ಪ್ರತಿಷ್ಠಾನದದಿಂದ

     5,000/- ನಗದು ಬಹುಮಾನದೊಂದಿಗೆ "ಜಾನಪದ ಸಿರಿ" ಪ್ರಶಸ್ತಿ 2006.


6) "ಕಾಸರಗೋಡು ಕರಾವಳಿ ಪ್ರತಿಷ್ಠಾನದ" "ಸುವರ್ಣ ಕನ್ನಡಿಗೆ" ಪ್ರಶಸ್ತಿ 2006.


7) "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಕೃತಿಗೆ 

    ಸಿಂದಗಿಯ "ಬೇಂದ್ರೆ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ"

     3,000/- ರೂ. ಪ್ರಶಸ್ತಿ ಮೊತ್ತ 2007.


8) ’ನೆಲಮೂಲ ಸಂಸ್ಸøತಿ’  ಕೃತಿಗೆ 

    ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ-2010,

    ಬಹುಮಾನ ಮೊತ್ತ-ರೂ.2000


10) ’ನೆಲಮೂಲ ಸಂಸ್ಸøತಿ ಕೃತಿಗೆ ಜಾನಪದ ಸಂರಕ್ಷಣಾ ಪರಿಷತ್ತು 

     ಶ್ರೇಷ್ಠ ಕೃತಿ ಪ್ರಶಸ್ತಿ -2010


11) ಬಾಗಲಕೋಟ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ -2016


12) ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ –ಕವನ ಸಂಕಲನಕ್ಕೆ

       ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ-2016,

       ಬಹುಮಾನ ಮೊತ್ತ-ರೂ.2000




12) ಬೆಂಗಳೂರಿನ ಮಾತೃಭೂಮಿ ಸಂಸ್ಥೆಯಿಂದ 

     ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿ-2017


13) ಯಾದಗಿರಿ ಜಾನಪದ ಕಲಾಲೋಕದಿಂದ ಜಾನಪದ ಕಲಾ ಲೋಕ ಪ್ರಶಸ್ತಿ -2017


14) ಶಾಂತಿ ಬೀಜಗಳ ಜತನ ಕೃತಿಗೆ 2018 ನೇ ಸಾಲಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮುದ್ದಣ ಕಾವ್ಯ ಪ್ರಶಸ್ತಿ.


15) ಶಾಂತಿ ಬೀಜಗಳ ಕೃತಿಗೆ ಹರಿಹರದ ಹರಿಹರಶ್ರೀ ಪ್ರಶಸ್ತಿ’


16) ಮುಂಬೈನ ಮೊಗವೀರ ಪತ್ರಿಕೆ ನಡೆಸಿದ ರಾಷ್ರ್ಟಮಟ್ಟದ ಕಥಾ ಸ್ಪರ್ಧೆಯಲ್ಲಿ ‘ಸಧ್ಯಕಿದು ಜಮಖಂಡಿ ಸಂತಿ’ ಕಥೆಗೆ 5000 ರೂ ನಗದು ಬಹುಮಾನದೊಂದಿಗೆ ದ್ವಿತೀಯ ಬಹುಮಾನ.2022















‘ಬೆಳಕಾಯಿತು ಬಾಗಲಕೋಟೆ’

ಪ್ರಸಾರವಾದ 143 ಉಪನ್ಯಾಸಗಳು

ಸಾಮಾಜಿಕ ಜಾಲತಾಣದಲ್ಲಿ ಸದ್ದಿಲ್ಲದ ಕ್ರಾಂತಿ : ವಿಶ್ವವ್ಯಾಪಿ ಕನ್ನಡಿಗರಿಂದ ಮೆಚ್ಚುಗೆ.

ಕೊವಿಡ್ 19 ಕೊರೊನಾ ಕಾಲಘಟ್ಟದಲ್ಲಿ ವರ್ಷಪೂರ್ತಿ ನಿರಂತರ ನಡೆದ ಮಾಲಿಕೆ.

ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಸಾಧಕರ ಕುರಿತು ಫೇಸ್ ಬುಕ್ ಲೈವ್ ಸರಣಿ ಉಪನ್ಯಾಸ


ಸಂಯೋಜನೆ ; ಡಾ.ಪ್ರಕಾಶ ಗ.ಖಾಡೆ, ಬಾಗಲಕೋಟೆ ಮೊ.9845500890

(ಪರಿಕಲ್ಪನೆ : ಡಾ.ರಾಜಶೇಖರ ಮಠಪತಿ (ರಾಗಂ), ಮಾರ್ಗದರ್ಶನ : ಪ್ರೊ.ಬಿ.ಆರ್.ಪೊಲೀಸಪಾಟೀಲ.)

ಅ.ನಂ. ಪ್ರಸಾರವಾದ

ದಿನಾಂಕ ವಾರ ಸಾಧಕರ ಹೆಸರು ಉಪನ್ಯಾಸ ನೀಡಿದವರ ಹೆಸರು

1 3.7.2020 ಶುಕ್ರ ಪ್ರಸ್ತಾವನೆ ಡಾ.ರಾಜಶೇಖರ ಮಠಪತಿ (ರಾಗಂ)

2 6.7.2020 ಸೋಮ ಪ್ರೊ.ಸ.ಸ.ಮಾಳವಾಡ ಡಾ.ವೈ.ಎಂ.ಯಾಕೊಳ್ಳಿ,ಸವದತ್ತಿ

3 9.7.2020 ಗುರು ಬ.ಗಿ.ಯಲ್ಲಟ್ಟಿ ಪ್ರೊ.ಬಿ.ಆರ್.ಪೊಲೀಸಪಾಟೀಲ,ಬನಹಟ್ಟಿ

4 12.7.2020 ರವಿ ಡಾ.ಸ.ಜ.ನಾಗಲೋಟಿಮಠ ಡಾ.ಪ್ರಜ್ಞಾ ಮತ್ತಿಹಳ್ಳಿ,ಧಾರವಾಡ

5 15.7.2020 ಬುಧ ಕೆರೂರು ವಾಸುದೇವಾಚಾರ್ಯ ಡಾ.ಬಸು ಬೇವಿನಗಿಡದ,ಧಾರವಾಡ

6 18.7.2020 ಶನಿ ಜೀವಣ್ಣ ಮಸಳಿ ಡಾ.ವೀರೇಶ ಬಡಿಗೇರ,ಹಂಪಿ ಕನ್ನಡ ವಿ.ವಿ.

7 21.7.2020 ಮಂಗಳ ಪೂಜ್ಯ ಬಂಥನಾಳದ ಸಂಗನಬಸವ ಶಿವಯೋಗಿಗಳು ಸಂಗಮೇಶ ಪೂಜಾರಿ,ವಿಜಯಪುರ

8 24.7.2020 ಶುಕ್ರ ಬಿ.ಎಂ.ಹೊರಕೇರಿ ಕೆ.ಬಿ.ವೀರಲಿಂಗನಗೌಡರ,ಬಾದಾಮಿ

9 27.7.2020 ಸೋಮ ಪ್ರೊ.ಪಿ.ವಿ.ವಜ್ರಮಟ್ಟಿ ಡಾ.ಜೆ.ಪಿ.ದೊಡಮನಿ,ಅಥಣಿ

10 30.7.2020 ಗುರು ಪಿ.ಎಂ.ನಾಡಗೌಡರು ಪೂಜ್ಯ ಬಸವ ಮೃತ್ಯುಂಜಯ ಶ್ರೀಗಳು, ಕೂಡಲಸಂಗಮ

11 3.8.2020 ಸೋಮ ಈಶ್ವರ ಸಣಕಲ್ಲ ಡಾ.ಯಶವಂತ ಕೊಕ್ಕನವರ,ಜಮಖಂಡಿ

12 6.8.2020 ಗುರು ಡಾ.ಫ.ಗು.ಹಳಕಟ್ಟಿ ಡಾ.ಪಿಕೆ. ರಾಠೋಡ,ಧಾರವಾಡ ಕ.ವಿ.ವಿ.

13 9.8.2020 ರವಿ ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳು ಪೂಜ್ಯ ಶಿವಕುಮಾರಸ್ವಾಮಿಗಳು,ಕಪ್ಪತಗುಡ್ಡ,ಗದಗ

14 12.8.2020 ಬುಧ ಡಾ.ಎಸ್.ಎಂ.ಹುಣಶ್ಯಾಳ ಮಲ್ಲಿಕಾರ್ಜುನ ಹೆಗ್ಗಳಗಿ,ಮಹಾಲಿಂಗಪುರ

15 15.8.2020 ಶನಿ ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಡಾ.ವಿನಯ ಹಿರೇಮಠ,ಬಾಗಲಕೋಟೆ

ಸಂದರ್ಶನ : ಡಾ.ಪ್ರಕಾಶ ಗ.ಖಾಡೆ

16 18.8.2020 ಮಂಗಳ ಪೂಜ್ಯ ಡಾ.ಮಹಾಂತ ಶಿವಯೋಗಿಗಳು ಪೂಜ್ಯ ಡಾ.ಈಶ್ವರ ಮಂಟೂರ,ಮಧುರಖಂಡಿ

17 21.8.2020 ಶಕ್ರ ಜಿ.ಬಿ.ಖಾಡೆ ಡಾ.ಸಿದ್ದರಾಮ ಬಂಗಾರಿ,ಬೀಳಗಿ

18 24.8.2020 ಸೋಮ ದಾನಪ್ಪ ಜತ್ತಿ ಕಲ್ಲೇಶ ಕುಂಬಾರ,ಹಾರೂಗೇರಿ

19 27.8.2020 ಗುರು ಡಾ.ಎಸ್.ಎಸ್.ಬಸುಪಟ್ಟದ ಡಾ.ವಿ.ಎ.ಬೆನಕನಾಳ,ಗುಳೇದಗುಡ್ಡ

20 30.8.2020 ರವಿ ಸತ್ಯಕಾಮ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ,ಬೆಂಗಳೂರು

21 3.9.2020 ಗುರು ಚಿಕ್ಕೋಡಿ ತಮ್ಮಣ್ಣಪ್ಪನವರು ಪ್ರೊ.ಮಲ್ಲಿಕಾರ್ಜುನ ಹುಲಗಬಾಳಿ,ಬನಹಟ್ಟಿ

22 6.9.2020 ರವಿ ತಾಳಿಕೋಟಿ ಖಾಸ್ಗತ ಶಿವಯೋಗಿಗಳು ಪ್ರೊ.ಚಂದ್ರಗೌಡ ಕುಲಕರ್ಣಿ,ತಾಳಿಕೋಟಿ

23 9.9.2020 ಬುಧ ರಾಷ್ಟ್ರಪತಿ ಡಾ.ಬಿ.ಡಿ.ಜತ್ತಿ ಡಾ.ಪ್ರಕಾಶ ಗ.ಖಾಡೆ, ಬಾಗಲಕೋಟೆ

24 12.9.2020 ಶನಿ ಬಿ.ಆರ್.ಅರಿಷಿಣಗುಡಿ ಡಾ.ಗಣೇಶ ಅಮೀನಗಡ, ಮೈಸೂರು

25 15.9.2020 ಮಂಗಳ ಶಂ.ಗು.ಬಿರಾದಾರ ಪ.ಗು.ಸಿದ್ದಾಪುರ,ಮುಳವಾಡ

26 18.9.2020 ಶುಕ್ರ ಬೀಳೂರು ಗುರುಬಸವ ಶ್ರೀಗಳು ಸಿದ್ದರಾಮ ಮನಹಳ್ಳಿ, ಬಾಗಲಕೋಟೆ

27 21.9.2020 ಸೋಮ ‘ಸಿಸು’ಸಂಗಮೇಶ ಜಂಬುನಾಥ ಕಂಚ್ಯಾಣಿ,ವಿಜಯಪುರ

28 24.9.2020 ಗುರು ಕೃಷ್ಣಮೂರ್ತಿ ಪುರಾಣಿಕ ಡಾ.ಚನ್ನಪ್ಪ ಕಟ್ಟಿ, ಸಿಂದಗಿ

29 27.9.2020 ರವಿ ರಾವಬಹದ್ದೂರ ಡಾ.ಶಾರದಾ ಮುಳ್ಳೂರ, ಜಮಖಂಡಿ

30 30.9.2020 ಬುಧ ಡಾ.ಮಹಾದೇವ ಕಣವಿ ಪ್ರೊ.ಚಂದ್ರಶೇಖರ ಹೆಗಡೆ,ಬೀಳಗಿ

31 4.10.2020 ರವಿ ಶ್ರೀರಂಗರು ಪ್ರೊ.ರಾಜಕುಮಾರ ಬಡಿಗೇರ,ಬೆಂಗಳೂರು

32 8.10.2020 ಗುರು ಪರಶುರಾಮ ಚಿತ್ರಗಾರ ಜಯಶ್ರೀ ಭಂಡಾರಿ,ಬಾದಾಮಿ

33 11.10.2020 ರವಿ ಜನರಲ್ ಜಿ.ಜಿ.ಬೇವೂರ ಎಚ್.ಕೆ.ಅವಟಿ,ಎಂ.ಬಿ.ಕಟ್ಟಿಮನಿ,ವಿಜಯಪುರ

34 15.10.2020 ಗುರು ಹರ್ಡೇಕರ ಮಂಜಪ್ಪನವರು ಡಾ.ಮಲ್ಲಿಕಾರ್ಜುನ ಮೇತ್ರಿ,ವಿಜಯಪುರ

35 18.10.2020 ರವಿ ಪಾರಿಜಾತದ ಅಪ್ಪಾಲಾಲ  ನದಾಫ ಶಿವಾನಂದ ಶೆಲ್ಲಿಕೇರಿ,ಮುಧೋಳ

36 22.10.2020 ಗುರು ಕುಮಾರ ಕಕ್ಕಯ್ಯ ಪೋಳ ಡಾ.ಅರ್ಜುನ ಗೊಳಸಂಗಿ,ಗದಗ

37 25.10.2020 ರವಿ ಮೊಹರೆ ಹನಮಂತರಾಯರು ಅಶೋಕ ಹಂಚಲಿ, ಮುದ್ದೇಬಿಹಾಳ

38 29.10.2020 ಗುರು ಗೀ ಗೀ ಗಾರುಡಿಗ ಕಡಣಿ ಕಲ್ಲಪ್ಪ ಡಾ.ರಮೇಶ ಎಸ್.ಕತ್ತಿ, ಆಲಮೇಲ

39 1.11.2020 ರವಿ ಪಿ.ಬಿ.ದುತ್ತರಗಿ ಡಾ.ವಿಶ್ವನಾಥ ವಂಶಾಕೃತಮಠ,ಇಳಕಲ್ಲ

40 5.11.2020 ಗುರು ವಾಸಣ್ಣ ದೇಸಾಯಿ ಮಹಾದೇವ ಕಂಬಾಗಿ, ಇಳಕಲ್ಲ

41 8.11.2020 ರವಿ ಡಾ.ಬಿ.ಆರ್.ಹಿರೇಮಠ ಡಾ.ಬಿ.ಎಸ್.ಬಿರಾದಾರ,ಬಾಗಲಕೋಟೆ

42 12.11.2020 ಗುರು ಚನ್ನಪ್ಪ ಕರಡಿ ದಾಕ್ಷಾಯಣಿ ಮಂಡಿ,ಮಹಾಲಿಂಗಪುರ

43 15.11.2020 ರವಿ ದು.ನಿಂ.ಬೆಳಗಲಿ ಪ್ರಾ.ಚಂದ್ರಪ್ರಭಾ ಬಾಗಲಕೋಟ,ರಬಕವಿ

44 19.11.2020 ಗುರು ಡಾ.ಆರ್.ಬಿ.ಪಾಟೀಲ ಡಾ.ಜಿನದತ್ತ ಹಡಗಲಿ, ಧಾರವಾಡ

45 22.11.2020 ರವಿ ಡಾ.ಸಿಂಪಿ.ಲಿಂಗಣ್ಣ ಡಾ.ಸದಾನಂದ ಬಿಳ್ಳೂರ, ಪುಣೆ

46 26.11.2020 ಗುರು ಅನ್ನದಾನಿ ಹಿರೇಮಠ ಡಾ.ಬಸವರಾಜ ಗವಿಮಠ, ಇಳಕಲ್ಲ

47 29.11.2020 ರವಿ ಡಾ.ಸಿ.ಚ.ನಂದೀಮಠ ಪ್ರಾ.ಜಿ.ಬಿ.ದಾನಶೆಟ್ಟಿ.ಬಾಗಲಕೋಟೆ

48 3.12.2020 ಗುರು ಅಮೀರಬಾಯಿ ಕರ್ನಾಟಕಿ ಚಂದ್ರಶೇಖರ ದೇಸಾಯಿ, ಮುಧೋಳ

49 6.12.2020 ರವಿ ಬರಗಿ ರಾಚಯ್ಯನವರು ಎಸ್.ವಿಜಯಲಕ್ಷ್ಮೀ ಬದನೂರ

50 10.12.2020 ಗುರು ಜನಪದ ಕೋಗಿಲೆ ಗೌರಮ್ಮ ಚಲವಾದಿ ಪ್ರೊ.ಜಿ.ಕೆ.ತಳವಾರ, ಬಾಗಲಕೋಟೆ

51 13.12.2020 ರವಿ ಬಿ.ಪಿ.ಹಿರೇಸೋಮಣ್ಣವರ ಚಂದ್ರಶೇಖರ ರೂಗಿ, ಮುಧೋಳ

52 17.12.2020 ಗುರು ಕೆ.ಪಿ.ನಾಡಗೌಡರು ವೆಂಕಟೇಶ ಗುಡೆಪ್ಪನವರ, ಮುಧೋಳ

53 20.12.2020 ರವಿ ಮಧುರಚೆನ್ನ ಡಾ.ಎಚ್.ಎಸ್.ಸತ್ಯನಾರಾಯಣ.ಚಿಕ್ಕಮಗಳೂರು

54 24.12.2020 ಗುರು ಪ್ರಸನ್ನ ವೆಂಕಟದಾಸರು ಡಾ.ಸುಭಾಷ ಕಾಖಂಡಕಿ, ಬೆಂಗಳೂರು

55 27.12.2020 ರವಿ ಡಾ.ಬಿ.ಎಸ್.ಗದ್ದಗಿಮಠ ಡಾ.ಎಚ್.ಎಸ್.ಘಂಟಿ, ಗುಳೇದಗುಡ್ಡ

56 31.12.2020 ಗುರು ಕಂದಗಲ್ಲ ಹನಮಂತರಾಯರು ಡಾ.ಪ್ರಕಾಶ ನರಗುಂದ ,ಮುದ್ದೇಬಿಹಾಳ

57 3.1.2021 ರವಿ ಸಂಗಮೇಶ ಹೊಸಮನಿ ಸಿದ್ದಲಿಂಗಪ್ಪ ಬೀಳಗಿ, ಹುನಗುಂದ

58 7.1.2021 ಗುರು ಜೋರಾಪುರ ಗುರುರಾಯರು ಪ್ರಾ.ಅಶೋಕ ಕಂದಗಲ್ಲ ,ಬಾಗಲಕೋಟೆ

59 10.1.2021 ರವಿ ಕೆ.ಎಂ.ಪಟ್ಟಣಶೆಟ್ಟರು ರವಿ.ಕಂಗಳ, ಬಾದಾಮಿ

60 14.1.2021 ಗುರು ಮಹಾದಾನಿ ಗಂಗಮ್ಮ ಚಿನಿವಾರ ಗೀತಾ ಶಿವಮೂರ್ತಿ, ಮುದ್ದೇಬಿಹಾಳ

61 17.1.2021 ರವಿ ವೇದಾಂತಕೇಸರಿ ಪೂಜ್ಯ ಮಲ್ಲಿಕಾರ್ಜುನಶ್ರೀಗಳು ಪ್ರೊ.ಬಿ.ಆರ್.ಪೊಲೀಸಪಾಟೀಲ,ಬನಹಟ್ಟಿ

62 21.1.2021 ಗುರು ಅಥರ್ಗಾ ರೇವಣಸಿದ್ದ ಮಾಸ್ತರರು ಪ್ರೊ.ಎಂ.ಎಸ್.ಬದಾಮಿ,ರಬಕವಿ

63 24.1.2021 ರವಿ ಗಣಿತಜ್ಞ ಭಾಸ್ಕರಾಚಾರ್ಯ-2 ವಿದ್ವಾನ್ ಗುರುರಾಜ ಆಚಾರ್ಯ ಹೆರಕಲ್ಲ,ಹುಬ್ಬಳ್ಳಿ

64 28.1.2021 ಗುರು ಶ್ರೀಮಂತ ಆರ್.ಎಂ.ದೇಸಾಯಿ ಸಿದ್ದರಾಮ ಶಿರೋಳ,ಬೀಳಗಿ

65 31.1.2021 ರವಿ ಕವಿ ಸಂಗಮೇಶ ಕೋಟಿ ಡಾ.ಶಿವಾನಂದ ಕುಬಸದ,ಮುಧೋಳ

66 4.2.2021 ಗುರು ಪ್ರೊ.ಜಿ.ಬಿ.ಸಜ್ಜನ ಡಾ.ರಾಜಶೇಖರ ಮಠಪತಿ (ರಾಗಂ)

67 7.2.2021 ರವಿ ಕೃಷಿತಜ್ಞ ಡಾ.ಎನ್.ಪಿ.ಪಾಟೀಲ ಗುರುರಾಜ ಲೂತಿ,ಬೀಳಗಿ

68 11.2.2021 ಗುರು ಜ್ಞಾನ ದಾಸೋಹಿ ಗುರು ಬಸವಾರ್ಯ ಮಠ ಗುರುಗಳು ಡಾ.ಮಲ್ಲಣ್ಣ ನಾಗರಾಳ,   

ಪ್ರಭು ಮಾಲಗತ್ತಿಮಠ,ಹುನಗುಂದ

69 14.2.2021 ರವಿ ಕವಿ ಶಂಕರ ಕಟಗಿ ಕಿರಣ ಬಾಳಾಗೋಳ, ಬೀಳಗಿ

70 18.2.2021 ಗುರು ಸಿದ್ದು ನ್ಯಾಮಗೌಡರು ಪ್ರೊ.ಟಿ.ಪಿ.ಗಿರಡ್ಡಿ,ಜಮಖಂಡಿ

71 21.2.2021 ರವಿ ಅಬ್ಬಾಸ್ ಮೇಲಿನಮನಿ ಲಕ್ಷ್ಮಣ ಬದಾಮಿ,ಸಿರೂರ

72 25.2.2021 ಗುರು ಗುರುದೇವ ರಾನಡೆ ಸೋಮನಾಥ ಗೀತಯೋಗಿ,ಇಂಡಿ

73 28.2.2021 ರವಿ ಎಂ.ಸಿ.ಮೋದಿ ವಿ.ಬಿ.ಮಾಳಿ,ಲೋಕಾಪುರ

74 4.3.2021 ಗುರು ಸೋಮಶೇಖರ ಸಾಲಿ ಶಾಂತಯ್ಯ ಪರಡಿಮಠ,ದಾವಣಗೆರೆ

75 7.3.2021 ರವಿ ಕೌಜಲಗಿ ನಿಂಗಮ್ಮ ಗೀತಾ ದಾನಶೆಟ್ಟಿ, ಬಾಗಲಕೋಟೆ

76 11.3.2021 ಗುರು ರಾಮಣ್ಣ ಸೊನ್ನದ ಸಂಗಮೇಶ ಸಣ್ಣತಂಗಿ, ಬಾಗಲಕೋಟೆ

77 14.3.2021 ರವಿ ಸಿಂಹಾಸನ ಮಾಮಲೇದಾರ ಶಂಕರ ಬೈಚಬಾಳ,ವಿಜಯಪುರ

78 18.3.2021 ಗುರು ಎಲ್.ಎಸ್.ಇನಾಮದಾರ ದ.ರಾ.ಪುರೋಹಿತ, ಕಲಾದಗಿ

79 21.3.2021 ರವಿ ನಾಲತವಾಡ ವೀರೇಶ್ವರ ಶರಣರು ಐ.ಬಿ.ಹಿರೇಮಠ.ಮುದ್ದೆಬಿಹಾಳ

80 25.3.2021 ಗುರು ಚಂದ್ರವರ್ಮ ಬಿ.ಆರ್.ಕೊಟ್ಯಾಳಕರ ಡಾ.ಜಿ.ಎಸ್.ಭೂಸಗೊಂಡ,ತಿಕೋಟಾ

81 28.3.2021 ರವಿ ಕೃಷ್ಣಾಜಿ ದೇಶಪಾಂಡೆ ಮುರುಗೇಂದ್ರ ವಿರಕ್ತಮಠ, ಲೋಕಾಪುರ

82 1.4.2021 ಗುರು ಬಿಂದುಮಾಧವ ಕುಲಕರ್ಣಿ ವೆಂಕಟೇಶ ಇನಾಮದಾರ,ಬಾದಾಮಿ

83 4.4.2021 ರವಿ ಸನಾದಿ ಅಪ್ಪಣ್ಣ ಡಾ.ಎಸ.ಡಿ.ಕೆಂಗಲಗುತ್ತಿ,ಬಾಗಲಕೋಟೆ

84 8.4.2021 ಗುರು ಜ್ಯೋತಿಪ್ರಕಾಶ ಸಾಳುಂಕೆ ಮೋಹನ ದೇಶಪಾಂಡೆ,ಬಾಗಲಕೋಟೆ

85 11.4.2021 ರವಿ ಅದೃಶ್ಯಪ್ಪ ಮಾನ್ವಿ ಶಂಕರ ಹೂಲಿ,ಬಾದಾಮಿ

86 15.4.2021 ಗುರು ಅರ್ಜುನ ಕೊರಟಕರ ಮಲ್ಲಿಕಾರ್ಜುನ ಇಂಡಿ,ಜಮಖಂಡಿ

87 18.4.2021 ರವಿ ಬ.ವೀ.ಹಂಪನಗೌಡ್ರ ಜಿ.ಎನ್.ತೆಗ್ಗಳ್ಳಿ, ವಿಜಯಪುರ

88 22.4.2021 ಗುರು ರಬಕವಿ ಸದ್ಗುರು ಬ್ರಹ್ಮಾನಂದರು ಗಿರೀಶ ಮುತ್ತೂರ , ರಬಕವಿ

89 25.4.2021 ರವಿ ಡಾ.ಎಸ್.ಎಸ್.ನರಸಣಗಿ ಗಿರಿರಾಜ ಹೊಸಮನಿ, ಲಿಂಗಸಗೂರ

90 29.4.2021 ಗುರು ಬಿ.ಟಿ.ಪಾಟೀಲ,ಶಿರಬೂರ ಶಿವಾನಂದ ಶೆಲ್ಲಿಕೇರಿ,ಮುಧೋಳ

91 2.5.2021 ರವಿ ಬಿ.ಎಸ್.ಪಾಟೀಲ ಸಾಸನೂರ ಶ್ರೀಕಾಂತ ಪತ್ತಾರ,  ತಾಳಿಕೋಟಿ

92 6.5.2021 ಗುರು ಆಕಾಶವಾಣಿಯ ಅನಿಲ ದೇಸಾಯಿ ಡಾ.ಶಶಿಧರ ನರೇಂದ್ರ, ಧಾರವಾಡ

93 9.5.2021 ರವಿ ಮಹಾಲಿಂಗಲೀಲೆಯ ಬಸವ ಕವಿ ಡಾ.ಅಶೋಕ ನರೋಡೆ,ಮಹಾಲಿಂಗಪುರ

94 13.5.2021 ಗುರು ಜಂಗಿನ ಮರಗಯ್ಯನವರು ಪ್ರಾ.ಎ.ಎಸ್.ಪಾವಟೆ

95 16.5.2021 ರವಿ ಕನ್ನಡ ಕಟ್ಟಾಳು ರಾಮ ಜಾಧವ ಡಾ.ರಾಮಕೃಷ್ಣ ಮರಾಠೆ

96 20.5.2021 ಗುರು ನಾಟಕಕಾರ ಕೆ.ಎನ್.ಸಾಳುಂಕೆ ಡಾ.ಮುರ್ತುಜಾ ಬ.ಒಚಿಟಿ, ಹುನಗುಂದ

97 23.5.2021 ರವಿ ಪ್ರೊ.ಭುಜೇಂದ್ರ ಮಹಿಷವಾಡಿ ಆನಂದ ಕುಂಚನೂರ,ಮೈಸೂರ

98 27.5.2021 ಗುರು ಎಸ್.ಆರ್.ಕಂಠಿ ಮಲ್ಲಿಕಾರ್ಜುನ ಅಂಗಡಿ,ಇಳಕಲ್ಲ

99 30.5.2021 ರವಿ ಡಾ.ಎಂ.ಎಂ.ಕಲಬುರ್ಗಿ ಡಾ.ವೀರಣ್ಣ ರಾಜೂರ,ಧಾರವಾಡ

100 3.6.2021 ಗುರು ತೋಂಟದ ಡಾ.ಸಿದ್ದಲಿಂಗಶ್ರೀಗಳು ಡಾ.ಚಂದ್ರಶೇಖರ ವಸ್ತ್ರದ,ಗದಗ

101 6.6.2021 ರವಿ ಆಲೂರ ವೆಂಕಟರಾಯರು ಮಲ್ಲಿಕಾರ್ಜುನ ಶೆಲ್ಲಿಕೇರಿ,ಬಾಗಲಕೋಟೆ

102 10.6.2021 ಗುರು ಪಿ.ಎಂ.ಬಾಂಗಿ ಪೂಜ್ಯ ಡಾ.ಚನ್ನಬಸವಸ್ವಾಮಿಜಿ,ಓಲೇಮಠ,ಜಮಖಂಡಿ

103 13.6.2021 ರವಿ ವೀರವೈರಾಗ್ಯ ಮಲ್ಲಣಾರ್ಯರು ಬಸವರಾಜ ಎಸ್.ಮಠ (ಜಲಜಮಿತ್ರ)

104 17.6.2021 ಗುರು ಪೂಜ್ಯ ಸೊನ್ನದ ಶಿವಾನಂದ ಶಿವಯೋಗಿಗಳು ಸಿದ್ದಲಿಂಗ ಮನಹಳ್ಳಿ,ಮಸಬಿನಾಳ,ವಿಜಯಪುರ

105 20.6.2021 ರವಿ ಪಡಗಾನೂರ ಶಂಕರಗೌಡರು ಬಾಳನಗೌಡ ಪಾಟೀಲ,ಪಡಗಾನೂರ

106 24.6.2021 ಗುರು ಬಿ.ಎಸ್.ಪಾಟೀಲ,ಮನಗೂಳಿ ಸಿದ್ದರಾಮ ಬಿರಾದಾರ,ಮನಗೂಳಿ

107 27.6.2021 ರವಿ ಎನ್.ವಿ.ಜೋಶಿ ಶ್ರೀನಿವಾಸ ಕುಲಕರ್ಣಿ,ಧಾರವಾಡ

108 1.7.2021 ಗುರು ಶರಣಶ್ರೀ ಯಮನೂರೇಶ ಬಿರಾದಾರ ಗುಂಡುರಾವ ಧನಪಾಲ,ತಾಳಿಕೋಟಿ

109 4.7.2021 ರವಿ ಹಾದಿಮನಿ ಬಸವಪ್ಪ ಶರಣರು ಗಂಗಾಧರ ಅವಟೇರ,ಉಪನ್ಯಾಸಕರು,ಇಟಗಿ

110 8.7.2021 ಗುರು ಕಾಖಂಡಕಿ ಮಹಿಪತಿದಾಸರು ನಾರಾಯಣ ಬಾಬಾನಗರ,ವಿಜಯಪುರ

111 11.7.2021 ರವಿ ರಾ.ಯ.ಧಾರವಾಡಕರ ಡಾ.ಎಚ್.ಎಸ್.ಸತ್ಯನಾರಾಯಣ,ಚಿಕ್ಕಮಗಳೂರು

112 15.7.2021 ಗುರು ಪೂಜ್ಯ ಬೋರಗಿ-ಪುರದಾಳದ ಭೀಮಾಶಂಕರ ಮಹಾರಾಜರು ಬಸವರಾಜ ಬಡಿಗೇರ,ಬೋರಗಿ

113 18.7.2021 ರವಿ ಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳು, ಮುಧೋಳ ಡಾ.ಮೃತ್ಯುಂಜಯ ರುಮಾಲೆ,ಹೊಸಪೇಟೆ

114 22.7.2021 ಗುರು ಸಜ್ಜಲಗುಡ್ಡದ ಶ್ರೀ ಶರಣಮ್ಮನವರು ಇಂದುಮತಿ ಅಂಗಡಿ,(ಪುರಾಣಿಕ),ಇಳಕಲ್ಲ

115 25.7.2021 ರವಿ ಜಿ.ಎಸ್.ಬಾಗಲಕೋಟ ರುದ್ರಗೌಡ ಪಾಟೀಲ,ಜಮಖಂಡಿ

116 29.7.2021 ಗುರು ವಿಜಯ ಸಾಸನೂರ ಮಲ್ಲಿಕಾರ್ಜುನ ಶೆಲ್ಲಿಕೇರಿ,ಬಾಗಲಕೋಟೆ

117 1.8.2021 ರವಿ ಸಾರವಾಡದ ಸ್ವಾತಂತ್ರ್ಯ ಹೋರಾಟಗಾರರು ಡಾ.ಸೋಮಶೇಖರ ವಾಲಿ,ವಿಜಯಪುರ

118 5.8.2021 ಗುರು ಸೀತಾಬಾಯಿ ತಿಮಸಾನಿ ಡಾ.ವಿಜಯಶ್ರೀ ಇಟ್ಟಣ್ಣವರ,ಬೀಳಗಿ

119 8.8.2021 ರವಿ ಪರಪ್ಪ ಸಂಗಪ್ಪ ಸಜ್ಜನ ಯೋಗೇಶ ಲಮಾಣಿ,ಅಮೀನಗಡ

120 12.8.2021 ಗುರು ಹುನಗುಂದ ಭಾಗದ ಸ್ವಾತಂತ್ರ್ಯ ಹೋರಾಟಗಾರರು ಡಾ.ನಾಗರಾಜ ನಾಡಗೌಡ, ಹುನಗುಂದ

121 15.8.2021 ರವಿ ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಡಾ.ವಿನಯ ಹಿರೇಮಠ, ಬಾಗಲಕೋಟೆ

122 19.8.2021 ಗುರು ಸ್ವಾತಂತ್ರ್ಯ ಹೋರಾಟಗಾರ ಸಾಬಣ್ಣ ಶಿಂಧೆ,ಗುಳೇದಗುಡ್ಡ ಪ್ರಾ.ಸಿ.ಎಂ.ಜೋಶಿ, ಗುಳೇದಗುಡ್ಡ

123 22.8.2021 ರವಿ ಚನ್ನಬಸಪ್ಪ ಅಂಬಲಿಯವರು ಸಂಗಮೇಶ ಬದಾಮಿ, ವಿಜಯಪುರ

124 26.8.2021 ಗುರು ಸ್ವಾತಂರ್ತ್ಯ ಹೋರಾಟಗಾರ  ಮುದಕಪ್ಪ ಕಲಬುರ್ಗಿ ಡಾ.ಉಮೇಶ ತಿಮ್ಮಾಪುರ,ಬಾಗಲಕೋಟೆ

125 29.8.2021 ರವಿ ಮಸಬಿನಾಳದ ಸ್ವಾತಂತ್ರ್ಯ ಹೋರಾಟಗಾರರು ಶಂಕರ ಬೈಚಬಾಳ,ವಿಜಯಪುರ

126 5.9.2021 ರವಿ ಬಾಗಲಕೋಟೆ ಜಿಲ್ಲೆ ರಚನೆಯ ಇಪ್ಪತ್ತೈದು ; ಪ್ರಾಸ್ತಾವಿಕ ಡಾ.ಶ್ರೀರಾಮ ಇಟ್ಟಣ್ಣವರ,ಬೀಳಗಿ

127 12.9.2021 ರವಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,ಬಾಗಲಕೋಟೆ ಡಾ.ವಸಂತ ಎಂ.ಗಾಣಿಗೇರ,ಬಾಗಲಕೋಟೆ

128 19.9.2021 ರವಿ ಬಾಗಲಕೋಟೆ ಜಿಲ್ಲೆಯ ಸಾಹಿತ್ಯ ಪ್ರಾ.ಬಿ.ಆರ್.ಪೊಲೀಸಪಾಟೀಲ,ಬನಹಟ್ಟಿ

129 26.9.2021 ರವಿ ಬಾಗಲಕೋಟೆ ಜಿಲ್ಲೆಯ ಶಿಕ್ಷಣ ಸಿದ್ಧರಾಮ ಮನಹಳ್ಳಿ,ಬಾಗಲಕೋಟೆ

130 3.10.2021 ರವಿ ಬಾಗಲಕೋಟೆ ಜಿಲ್ಲೆಯ ಪ್ರವಾಸೋದ್ಯಮ ಪ್ರಾ.ಅಶೋಕ ಕಂದಗಲ್ಲ,ಬಾಗಲಕೋಟೆ

131 10.10.2021 ರವಿ ಬಾಗಲಕೋಟೆ ಜಿಲ್ಲೆಯ ಮಹಿಳಾ ಸಾಹಿತ್ಯ ಡಾ.ಸುಮಂಗಲಾ ಮೇಟಿ,ಇಳಕಲ್ಲ

132 17.10.2021 ರವಿ ಬಾಗಲಕೋಡೆ ಜಿಲ್ಲೆಯ ಕ್ರೀಡಾ ಕ್ಷೇತ್ರ ಶ್ರೀಕಾಂತ ದಾಸರ,ಬಾಗಲಕೋಟೆ

133 24.10.2021 ರವಿ ಬಾಗಲಕೋಟೆ ಜಿಲ್ಲೆಯ ಪತ್ರಿಕೋದ್ಯಮ ರಾಮ ಮನಗೂಳಿ,ಬಾಗಲಕೋಟೆ

134 31.11.2021 ರವಿ ಬಾಗಲಕೋಟೆ ಸಂಸ್ಕøತಿ ಡಾ.ಪ್ರಕಾಶ ಗ.ಖಾಡೆ, ಬಾಗಲಕೋಟೆ

135 7.11.2021 ರವಿ ಬಾಗಲಕೋಟೆ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಎಸ್.ಜಿ.ಕೋಟಿ,ಬಾಗಲಕೋಟೆ

136 14.11.2021 ರವಿ ಬಾಗಲಕೋಟೆ ಜಿಲ್ಲೆಯ ಮಕ್ಕಳ ಸಾಹಿತ್ಯ ಡಾ.ಲಲಿತಾ ಹೊಸಪ್ಯಾಟಿ,ಹುನಗುಂದ

137 21.11.2021 ರವಿ ಬಾಗಲಕೋಟೆ ಜಿಲ್ಲೆಯ ದೇಸಗತಿ ಮನೆತನಗಳು ಡಾ.ಸಂಗಮೇಶ ಕಲ್ಯಾಣಿ,ಮುಧೋಳ

138 28.11.2021 ರವಿ ಬಾಗಲಕೋಟೆ ಜಿಲ್ಲೆಯ ನೇಕಾರಿಕೆ ಮಹಾದೇವ ಬಸರಕೋಡ,ಅಮೀನಗಡ

139 5.12.2021 ರವಿ ಬಾಗಲಕೋಟೆ ಜಿಲ್ಲೆಯ ಮಠಮಾನ್ಯಗಳು ಡಾ.ರಾಜಶೇಖರ ಬಸುಪಟ್ಟದ,ಗುಳೇದಗುಡ್ಡ

140 19.12.2022 ರವಿ ಬಾಗಲಕೋಟೆ ಜಿಲ್ಲೆಯ ವೈದ್ಯಕೀಯ ಕ್ಷೇತ್ರದ ಸಾಧನೆ ಮತ್ತು ಸಾಧ್ಯತೆಗಳು ಡಾ.ಕರವೀರಪ್ರಭು ಕ್ಯಾಲಕೊಂಡ,ಬಾದಾಮಿ

141 26.12.2022 ರವಿ ಬಾಗಲಕೋಟೆ ಜಿಲ್ಲೆಯ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನೆಗಳು ಡಾ.ಲಿಂಗಾನಂದ ಗವಿಮಠ,ಜಮಖಂಡಿ

142 9.1.2022 ರವಿ ಬಾಗಲಕೋಟೆ ಜಿಲ್ಲೆಯ ರಂಗ ಪರಂಪರೆ ಎಸ್.ಕೆ.ಕೊನೆಸಾಗರ,ಹುನಗುಂದ

143 6.2.2022 ರವಿ ಪದ್ಮಶ್ರೀ ಇಬ್ರಾಹಿಂ ಸುತಾರ ಡಾ.ಅಶೋಕ ನರೋಡೆ,ಮಹಾಲಿಂಗಪುರ



     ಬೆಳಕಾಯಿತು ಬಾಗಲಕೋಟೆ ಫೇಸ್ಬುಕ್ ಲೈವ್ ಮೂಲಕ ಅವಿಭಜಿತ ವಿಜಯಪುರ ,ಬಾಗಲಕೋಟೆ ಜಿಲ್ಲೆಯ ಸಾಧಕರ ಕುರಿತು ನಾಡಿನ 143 ಉಪನ್ಯಾಸಕರು ಉಪನ್ಯಾಸ ನೀಡುವ ಮೂಲಕ ಈ ಸರಣಿಯ ಯಶಸ್ಸಿಗೆ ಕಾರಣರಾಗಿದ್ದಾರೆ, ಅವರೆಲ್ಲರ ಪ್ರೀತಿಗೆ ಹೃದಯಪೂರ್ವಕ ಧನ್ಯವಾದಗಳು. ವಿಶ್ವದೆಲ್ಲೆಡೆ ನೆಲೆಸಿದ ಕನ್ನಡಿಗರು ಕೇಳಿ ಹರಸಿದ್ದಾರೆ, ಸಾಧಕರ ಕುಟುಂಬವರ್ಗದವರು ಕರೆ ಮಾಡಿ ಧನ್ಯತೆ ಹಂಚಿಕೊಂಡಿದ್ದಾರೆ. ಪರಿಕಲ್ಪನೆ ರೂಪಿಸಿಕೊಟ್ಟ ಸಾಹಿತಿಗಳಾದ ಡಾ.ರಾಜಶೇಖರ ಮಠಪತಿ (ರಾಗಂ) ಹಾಗೂ ಸದಾ ಮಾರ್ಗದರ್ಶನ ಮಾಡುತ್ತಿರುವ  ಸಾಹಿತಿಗಳಾದ ಪ್ರಾ.ಬಿ.ಆರ್.ಪೊಲೀಸಪಾಟೀಲ ಅವರಿಗೆ. ಎಲ್ಲ ಕೇಳುಗರಿಗೆ, ಜೊತೆಗೆ ಮಾಧ್ಯಮ ಬಳಗದವರ ಪ್ರೊತ್ಸಾಹ, ಫೇಸ್ಬುಕ್ ಆಡಳಿತ ವರ್ಗದವರ ಪ್ರೀತಿ ಈ ಸರಣಿಯ ಯಶಸ್ಸಿಗೆ ಕಾರಣವಾಗಿದೆ. ಎಲ್ಲರಿಗೂ ಅನಂತ ಧನ್ಯವಾದಗಳು. ಸರಣಿ ನಿರಂತರವಾಗಿರುತ್ತದೆ.

7.72023           ಡಾ.ಪ್ರಕಾಶ ಗ.ಖಾಡೆ, ಸಂಯೋಜಕ, ಬೆಳಕಾಯಿತು ಬಾಗಲಕೋಟೆ ಮೊ.9845500890


Tuesday, July 11, 2023

ಬಾಳುಕುನ ಪುರಾಣ ಲೋಕಾರ್ಪಣೆ

 ಜಮಖಂಡಿ #ಕಥಾ_ಕಮ್ಮಟ

ಡಾ.ಪ್ರಕಾಶ ಖಾಡೆ ರಚಿತ '#ಬಾಳುಕುನ_ಪುರಾಣ ' ಲೋಕಾರ್ಪಣೆ.

ಜಮಖಂಡಿ ಕಥಾ ಕಮ್ಮಟ

ಬಾಳುಕುನ ಪುರಾಣ ಲೋಕಾರ್ಪಣೆ.


ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರ 11.7.2023 ರಂದು ಒಂದು ದಿನದ ಕಥಾ ಕಮ್ಮಟ ಹಾಗೂ ಡಾ.ಪ್ರಕಾಶ ಗ.ಖಾಡೆಯವರ 'ಬಾಳುಕುನ ಪುರಾಣ' ಕಥಾ ಸಂಕಲನದ ಲೋಕಾರ್ಪಣೆ ಮತ್ತು ಪುಸ್ತಕ ಓದು ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಕಥಾ ಕಮ್ಮಟದ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಕಥೆಗಾರ ಡಾ.ಪ್ರಕಾಶ ಖಾಡೆ ' ಕಥೆಗಳು ಎಲ್ಲ ಕಡೆಗೂ ಇವೆ.ನಾವು ನೋಡುವ ಕಣ್ಣಿರಬೇಕು.ಪ್ರತಿ ಸಂದರ್ಭ, ವಸ್ತು, ಘಟನೆಯನ್ನು ಕುತೂಹಲ,ಪ್ರೀತಿ ಮತ್ತು ಅನುಭೂತಿಯಿಂದ ಕಾಣಬೇಕು.ತನ್ನ ಪರಿಸರದ ಭಾಷೆ,ಜನರ ಮನೋಭಾವ ಹಾಗೂ ಸಂಪ್ರದಾಯ,ಆಚರಣೆಗಳನ್ನು ತೆರೆದ ಕಣ್ಣಿನಿಂದ ಗಮನಿಸಬೇಕು.ಹಿಂದಿನವರ ಮಾದರಿಗಳನ್ನು ಹೊಸ ಕಥೆಗಾರರು ಓದಿಕೊಂಡಿರಬೇಕು.ಇವೆಲ್ಲವು ಕಥಾ ರಚನೆಗೆ ಮೊದಲ ಮೆಟ್ಟಿಲು' ಎಂದು ಡಾ.ಖಾಡೆ ಹೇಳಿದರು.ಮೊದಲ ಗೋಷ್ಠಿಯಲ್ಲಿ ಮಾತನಾಡಿದ ಡಾ.ವೈ.ವೈ.ಕೊಕ್ಕನವರ 'ಕನ್ನಡ ಕಥಾ ಪರಂಪರೆ ಶ್ರೀಮಂತವಾಗಿದೆ,ಶಿವಕೋಟಾಚಾರ್ಯನಿಂದ ಹಿಡಿದು ಇವತ್ತಿನ ಕುಂವೀ,ಖಾಡೆ ವರೆಗೆ ಕನ್ನಡ ಕಥೆಗಳು ಸಮೃದ್ಧವಾಗಿ ಬಂದಿವೆ.ವಿದ್ಯಾರ್ಥಿಗಳು ಇವುಗಳ ಓದು, ಅಧ್ಯಯನಕ್ಕೆ ತೊಡಗಬೇಕು'ಎಂದರು.ಇದೇ ಸಂದರ್ಭದಲ್ಲಿ ಡಾ.ಪ್ರಕಾಶ ಖಾಡೆಯವರ ಕಥಾ ಸಂಕಲನ 'ಬಾಳುಕುನ ಪುರಾಣ ' ಕೃತಿ ಲೋಕಾರ್ಪಣೆ ಮಾಡಲಾಯಿತು.ಪ್ರೊ.ಸುಮಾ ಕೃತಿ ಪರಿಚಯ ಮಾಡಿದರು.ಪುಸ್ತಕ ಓದು ಅಭಿಯಾನದ ಅಂಗವಾಗಿ ಬಾಳುಕುನ ಪುರಾಣ ಕೃತಿಯ ಐವತ್ತೊಂದು ಪುಸ್ತಕಗಳನ್ನು ಖರೀದಿಸಿದ ಗ್ರಂಥದಾನಿ ಪ್ರೊ.ಎಸ್.ಕೆ.ಡೇಂಬ್ರೆ ಅವರು ಕಮ್ಮಟದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿ ಶಿಬಿರಾರ್ಥಿಗಳಿಗೆ ಉಚಿತವಾಗಿ ವಿತರಿಸಿದರು.ಐಸಿಎಸಿ ಮುಖ್ಯಸ್ಥ ಪ್ರೊ.ದಳವಾಯಿ ಪ್ರಸ್ತಾವಿಕ ಮಾತನಾಡಿದರು.ಡಾ.ಅಶ್ವಿನಿ ಬಬಲಿ ಹಾಗೂ ಕನ್ನಡ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಪಿ.ದೊಡಮನಿ ಅಧ್ಯಕ್ಷತೆ ವಹಿಸಿ  ಮಾತನಾಡಿ ವಿದ್ಯಾರ್ಥಿದೆಸೆಯಲ್ಲಿಯೇ ಸಾಹಿತ್ಯದ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು.ಸಣ್ಣ ಸಣ್ಣ ರಚನೆಗಳ ಮೂಲಕ ಬರವಣಿಗೆ ಆರಂಭಿಸಿ, ಮುಂದೆ ದೊಡ್ಡ ಲೇಖಕರಾಗಿ ಬೆಳೆಯಬಹುದು'ಎಂದರು.ಹೀನಾ ಸಾರವಾನ, ಅಶ್ವಿನಿ ತಳವಾರ ನಿರ್ವಹಣೆ ಮಾಡಿದರು.ವಿದ್ಯಾರ್ಥಿನಿ ಪ್ರತಿನಿಧಿ ಪ್ರಭಾವತಿ ಖೋಷ್ಟಿ ವಂದಿಸಿದರು.

Saturday, July 1, 2023

ಬಾಳುಕುನ ಪುರಾಣ ಕಥಾಸಂಕಲನ

 

ಬಾಳುಕುನ ಪುರಾಣ ಒಂದು ರೀತಿಯ ಕೃಷ್ಣನ ಪುರಾಣವೇ ಆಗಿದೆ: ಬಸು ಬೇವಿನಗಿಡದ


"ಇಲ್ಲಿಯ ಕೆಲವು ಕತೆಗಳನ್ನು ನಾನು ಓದಿದಾಗ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ವಿಚಾರಗಳನ್ನು ಓದುಗರ ಮುಂದಿಡುತ್ತಿರುವೆ. 'ಬಾಳುಕನ ಪುರಾಣ' ಎನ್ನುವ ಕಥೆಯನ್ನು ವಿಶಿಷ್ಟ ರೀತಿಯಲ್ಲಿ ಕಟ್ಟಲಾಗಿದೆ. ಘಟನೆಯೊಂದು ತುಂಬ ಕುತೂಹಲಕರವಾಗಿ ಸಾಗುತ್ತ ಆ್ಯಂಟಿ ಕ್ಲೈಮ್ಯಾಕ್ಸ್‌ ಸಾಧಿಸುವುದು ಈ ಕಥೆಯ ವೈಶಿಷ್ಠವಾಗಿದೆ" ಎನ್ನುತ್ತಾರೆ ಲೇಖಕ ಬಸು ಬೇವಿನಗಿಡದ. ಅವರು ಲೇಖಕ ಪ್ರಕಾಶ ಗ. ಖಾಡೆ ಅವರ ‘ಬಾಳುಕುನ ಪುರಾಣ’ ಕೃತಿಗೆ ಬರೆದ ಮುನ್ನುಡಿ...

“ಬಾಳುಕುನ ಪುರಾಣ” ಎನ್ನುವ ತಮ್ಮ ಈ ಕಥಾ ಸಂಕಲನದ ಬಗ್ಗೆ ನಾನು ಕೆಲವು ಮಾತುಗಳನ್ನು ಬರೆಯಬೇಕೆಂದು ಗೆಳೆಯರಾದ ಡಾ.ಪ್ರಕಾಶ ಖಾಡೆ ಅವರು ಇಚ್ಛೆ ಪಟ್ಟಿದ್ದು ಅವರ ಪ್ರೀತಿ ಹಾಗೂ ಆತ್ಮೀಯತೆಯ ದ್ಯೋತಕವೆಂದೇ ನಾನು ತಿಳಿದಿದ್ದೇನೆ. ಕಳೆದು ಎರಡು ಮೂರು ದಶಕಗಳಿಂದ ಪ್ರಕಾಶ ಅವರು ಸಾಹಿತ್ಯದಲ್ಲಿ ನಿರಂತರ ಕೃಷಿ ಮಾಡುತ್ತ ಬಂದಿದ್ದಾರೆ. ಒಂದಿಲ್ಲೊಂದು ಬಗೆಯಲ್ಲಿ ಅವರು ಸದಾ ಕ್ರಿಯಾಶೀಲರಾಗಿದ್ದುಕೊಂಡು ಬಾಗಲಕೋಟೆ ಪ್ರದೇಶದ ಸೀಮೆಯಲ್ಲಿ ಸಾಹಿತ್ಯದ ಗಂಧ ಸದಾ ಹರಡಿರುವಂತಹ ಒಂದು ಪ್ರಯತ್ನವನ್ನು ಹಿರಿಕಿರಿಯ ಸ್ನೇಹಿತರೊಂದಿಗೆ ಮಾಡುತ್ತಿರುವುದು ತುಂಬ ಶ್ಲಾಘನೀಯವಾಗಿದೆ. ಡಾ. ಪ್ರಕಾಶ ಖಾಡೆ ಅವರಲ್ಲಿಯ ಇನ್ನೂ ಒಂದು ಮೆಚ್ಚುಗೆಯ ಮಾತೆಂದರೆ ಅವರಲ್ಲಿನ ವ್ಯಾಸಂಗ ಗುಣ ಮತ್ತು ಬರವಣಿಗೆಯಲ್ಲಿನ ಶಿಸ್ತು. ಸಾಹಿತ್ಯದ ಯಾವುದೆ ಕೆಲಸ, ಪುಸ್ತಕ ಪ್ರಕಟನೆ, ಸಮಾರಂಭ ಹಾಗೂ ವಿಚಾರ ಸಂಕಿರಣ ಮತ್ತಿತರ ಕಾರ್ಯಗಳಲ್ಲಿ ಅವರು ತಮ್ಮನ್ನು ಶ್ರದ್ಧೆಯಿಂದ ತೊಡಗಿಸಿಕೊಳ್ಳುತ್ತ ಬಂದವರು. ಹೀಗಾಗಿ ಆಲಸ್ಯತನ, ಮುಂದೂಡುವ ಪ್ರವೃತ್ತಿ, ಯಾವುದೇ ಲೇಖನ ಬರೆಯುತ್ತೇನೆಂದು ಹೇಳಿ ಕೊನೆಗೆ ಕೈಕೊಡುವುದು ಮುಂತಾದ ಹೊಸ ಕಾಲದ ಕೆಲವು ಗೋಳಾಟಗಳಿಂದ ಅವರು ದೂರವಿದ್ದಾರೆ.

ಡಾ. ಪ್ರಕಾಶ ಖಾಡೆ ಅವರ ಮೊದಮೊದಲು ಕತೆಗಳನ್ನು ಬರೆಯುತ್ತಿದ್ದರೂ ನಡುವೆ ಈ ಪ್ರಕಾರದಲ್ಲಿ ಅಷ್ಟು ತೊಡಗಿಸಿಕೊಳ್ಳಲಿಲ್ಲವೆಂದು ಕಾಣುತ್ತದೆ. ಆದರೆ ಇತ್ತೀಚೆಗೆ ಅವರ ಹಲವು ಕತೆಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾದವು. ಕೆಲವು ಪ್ರಶಸ್ತಿ ಪುರಸ್ಕಾರಗಳನ್ನೂ ಪಡೆದವು. ಹತ್ತು ಕಥೆಗಳನ್ನೊಳಗೊಂಡ ಮೊದಲ ಕಥಾ ಸಂಕಲನ 'ಚೆಲುವಿ ಚಂದ್ರಿ' 2021 ರಲ್ಲಿ ಬಂತು ನಂತರ ಈಗ ಮತ್ತೇ ಹತ್ತು ಹೊಸ ಕಥೆಗಳ 'ಬಾಳುಕುನ ಪುರಾಣ' ಕಥಾ ಸಂಕಲನ ನಮ್ಮ ಕೈಯಲ್ಲಿದೆ.

ಇಲ್ಲಿಯ ಕೆಲವು ಕತೆಗಳನ್ನು ನಾನು ಓದಿದಾಗ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ವಿಚಾರಗಳನ್ನು ಓದುಗರ ಮುಂದಿಡುತ್ತಿರುವೆ. 'ಬಾಳುಕನ ಪುರಾಣ' ಎನ್ನುವ ಕಥೆಯನ್ನು ವಿಶಿಷ್ಟ ರೀತಿಯಲ್ಲಿ ಕಟ್ಟಲಾಗಿದೆ. ಘಟನೆಯೊಂದು ತುಂಬ ಕುತೂಹಲಕರವಾಗಿ ಸಾಗುತ್ತ ಆ್ಯಂಟಿ ಕ್ಲೈಮ್ಯಾಕ್ಸ್‌ ಸಾಧಿಸುವುದು ಈ ಕಥೆಯ ವೈಶಿಷ್ಠವಾಗಿದೆ. ಹಿಂದಿನ ಕಾಲವನ್ನು ಈಗಿನ ಕಾಲಕ್ಕೆ ಲೀಲಾಜಾಲವಾಗಿ ತರುವಲ್ಲಿ ನಿಪುಣರಾಗಿರುವ ಮತ್ತು ಪೌರಾಣಿಕ ಪ್ರಸಂಗಗಳನ್ನು ತುಂಬ ಸ್ವಾರಸ್ಯಕರವಾಗಿ ಪ್ರದರ್ಶನ ಮಾಡುವಲ್ಲಿ ಸೈ ಎನಿಸಿಕೊಂಡಿರುವ ಬಹುರೂಪಿ ತಂಡವೊಂದು ಬಾಳುಕುನ ಊರಿಗೆ ಬಂದು ತಮ್ಮ ಪ್ರದರ್ಶನ ತೋರಿಸುವ ಸಂದರ್ಭವೊಂದನ್ನು ಇಟ್ಟು, ಕಥೆಯನ್ನು ಪ್ರಕಾಶ ಖಾಡೆ ಅವರು ತಿಳಿ ಹಾಸ್ಯ ಹಾಗೂ ವಿನೋದಮಯ, ಪ್ರಸಂಗಗಳೊಂದಿಗೆ ಚಿತ್ರಿಸಿರುವುದು ಎಲ್ಲರ ಗಮನ ಸೆಳೆಯುತ್ತದೆ. ಈ ಕತೆಯಲ್ಲಿ ಏನೋ ರಹಸ್ಯವಿದೆಯೆಂದು ಅನಿಸಿದರೂ ಅದನ್ನು ಎಲ್ಲಿಯೂ ತೋರಗೊಡದೂರ, ಕತೆಯನ್ನು ನಿರ್ವಹಿಸಿರುವ ಕಥಾತಂತ್ರ ಮೆಚ್ಚುಗೆಯಾಗುತ್ತದೆ. ಕಳೆದು ಹೋಗಿರುವ, ಒಂದು ಕಾಲವನ್ನು ಅದರ ಎಲ್ಲ ಗುಣಾವಗುಣಗಳೊಂದಿಗೆ ಮುಂದಿರುವುದನ್ನುಇಲ್ಲಿ ಕಾಣಬಹುದಾಗಿದೆ.

ಈ ಕತೆಯಲ್ಲಿ ಬಹುರೂಪಿ ನಾಟಕ ತಂಡದವರು ಕೇವಲ ಪೌರಾಣಿಕ ಕಥೆಯೊಂದನ್ನು ಹೇಳುತ್ತಿಲ್ಲ. ಬದಲಾಗಿ ಆ ಕಥೆಯ ಮೂಲಕ ನಮ್ಮ ಅನೇಕ ಊರುಗಳ ವಾಸ್ತವ ನೋಟವೊಂದನ್ನು ಕಟ್ಟಿಕೊಡುವಲ್ಲಿ ಶಕ್ತರಾಗಿದ್ದಾರೆ ಎನಿಸುತ್ತದೆ. ಬಾಳುಕ ಎನ್ನುವ ಊರ ಗೌಡನ ಲೋಲುಪ ವ್ಯಕ್ತಿತ್ವವನ್ನು ತೋರಿಸುವುದು ಕಥೆಗಾರರ ಆಶಯವಾದಂತಿದೆ. ಇಲ್ಲಿಯ ಗೌಡ ಕಚ್ಚೆಹರುಕ ಸ್ವಭಾವದವನಾದರೂ ಅವನಲ್ಲಿಯ ಒಂದೆರಡು ಒಳ್ಳೆಯ ಗುಣಗಳನ್ನು ಕತೆಗಾರರು ಚಿತ್ರಿಸುತ್ತಾರೆ. ಆ ಮೂಲಕ ಕೇವಲ ಕಪ್ಪು-ಬಿಳುಪಿನ ವ್ಯತ್ಯಾಸಗಳಿಂದ ಗುರುತಿಸಬಹುದಾಗಿದ್ದ ಪಾತ್ರಗಳಿಗೆ ಇನ್ನೂ ಹಲವು ಮುಖಗಳಿರುವುದನ್ನು ಕತೆಗಾರರು ತೋರಿಸುತ್ತಾರೆ. ಮನುಷ್ಯರಲ್ಲಿಯ ಗುಣ-ಸ್ವಭಾವಗಳು ಎಷ್ಟೊಂದು ವಿಚಿತ್ರವಾಗಿರುತ್ತವೆ ಎನ್ನುವುದನ್ನು ಮುನ್ನೆಲೆಗೆ ತರಲು ಪ್ರಕಾಶ ಖಾಡೆ ಅವರು ಪ್ರಯತ್ನಿಸಿದ್ದಾರೆ. ಊರಲ್ಲಿಯ ವ್ಯಕ್ತಿಗಳು ಹೀಗೀಗೆ ಎಂದು ಸಾಮಾನ್ಯವಾಗಿ ಗುರುತಿಸಲಾಗುವ ಸಿದ್ಧಸೂತ್ರವನ್ನು ಕತೆಗಾರರು ನಿರಾಕರಿಸಿ ಹೊಸ ನೋಟವೊಂದನ್ನು ಲಾಲಿತ್ಯಮಯವಾಗಿ ಹೆಣೆಯುವಲ್ಲಿ ಸಫಲರಾಗಿದ್ದಾರೆ. ಆ ಮೂಲಕ ಸಾಮಾನ್ಯ ಕಥಾಹಂದರದ ಅಪಾಯವೊಂದನ್ನು ಅವರು ದಾಟಿದ್ದಾರೆ. ಸೀತೆಯ ಪಾತ್ರ ಮಾಡುವ ಮಹಿಳೆಯೊಂದಿಗೆ ಮೋಹಿತನಾಗಿ, ಅವಳೊಂದಿಗೆ ರಮ್ಯ ಕ್ಷಣಗಳನ್ನು ಕಳೆಯಬೇಕೆಂಬ ಜಾತಿಬಲಾಡ್ಯನೊಬ್ಬನ, ದುಡ್ಡು ಉಳ್ಳವನೊಬ್ಬನ ಇಚ್ಛೆಯನ್ನು ಕತೆಗಾರರು ಇಲ್ಲಿ ನವಿರಾಗಿ ನಿರೂಪಿಸಿದ್ದಾರೆ. ಕಲಾವಿದರನ್ನು, ಅದರಲ್ಲೂ ಮಹಿಳಾ ಕಲಾವಿದರನ್ನು ಹಗುರವಾಗಿ ಪರಿಗಣಿಸುವ ಅನೇಕರ ಸ್ವಭಾವ ಹಾಗೂ ವರ್ತನೆಗಳನ್ನು ಲೇಖಕರು ಹರಿತ ವ್ಯಂಗ್ಯ-ವಿಡಂಬನೆಯೊಂದಿಗೆ ಇಲ್ಲಿ ಟೀಕಿಸಿರುವುದು ಎದ್ದು ಕಾಣುತ್ತದೆ. ರಾವಣ ಸೀತೆಯನ್ನು ಹುಡುಕಿ ಹೋಗುವ, ಅವಳನ್ನು ವಶ ಪಡಿಸಿಕೊಳ್ಳಬೇಕೆನ್ನುವ ಅವನ ದುರಾಸೆ, ಸ್ವಚ್ಛಾ ಪ್ರವೃತ್ತಿ ಮುಂತಾದವು ಇಲ್ಲಿ ಬಾಳುಕುನ ವ್ಯಕ್ತಿತ್ವದೊಂದಿಗೆ ಸಮೀಕರಣಗೊಂಡಿರುವುದು ನಮ್ಮ ಮನ ಸೆಳೆಯುತ್ತದೆ.

ಬಹುರೂಪಿ ತಂಡ ಬಾಳುಕುನ ತೋಟದಲ್ಲಿ ರಾತ್ರಿ ಉಳಿದುಕೊಂಡಾಗ ಕುಂಭದ್ರೋಣ ಮಳೆ ಸುರಿದು ಅವರು ಅನಿವಾರ್ಯವಾಗಿ ಆ ರಾತ್ರಿ ಅಲ್ಲಿಯೇ ಉಳಿಯಬೇಕಾಗುತ್ತದೆ. ವಿದ್ಯುತ್‌ ಸಂಪರ್ಕ ತಪ್ಪಿಹೋಗಿ ಲ್ಯಾಟಿನ ಮಿಣಿಮಿಣಿಯೆನ್ನುವ ಚಿಮಣಿ ಹಾಗೂ ಲ್ಯಾಟಿನ್‌ನಲ್ಲಿ ತಪರುಗುಟ್ಟುವ ಮಳೆಯ ನಡುವೆ ತನಗೆ ಅವಳನ್ನು ಸಂಧಿಸುವ ಸುಸಂಧಿ ದೊರೆಯಬಹುದೆಂದು ಬಾಳುಕ ಹಿಗ್ಗಿ ಹೀರೆಕಾಯಿ ಆಗಿರುತ್ತಾನೆ.

ಸ್ವಲ್ಪ ಸಮಯದ ನಂತರ ತೋಟದ ಮನೆಯ ಕೋಣೆಯಿಂದ ಸೀತೆ ಚಿಟ್ಟನೆ ಚೀರುತ್ತಾ ಹೊರಗೆ ಓಡಿಬರುತ್ತಾಳೆ. ಇದಕ್ಕೆ ಬಹುಶ: ಬಾಳುಕನೇ ಕಾರಣ ಇರಬಹುದೆಂದು ತೋಟದ ಕೆಲಸಗಾರರು, ಅವರಿವರು ತಿಳಿದು ತಮ್ಮ ಸಾಹುಕಾರ ಬಹುರೂಪಿಗಳ ಕೈಗೆ ಸಿಕ್ಕಿ ಹಾಕಿಕೊಂಡರೆಂದು ಚಿಂತಿತಗೊಂಡು ಅಲ್ಲಿಗೆ ಧಾವಿಸುತ್ತಾರೆ. ಸೀತೆಯ ರೋದನ ಕೇಳಿ ಆಕೆಯ ಸಹರ್ತಿಗಳು ಸಹ ನೆರವಿಗೆ ಧಾವಿಸುತ್ತಾರೆ. ಆದರೆ ಎಲ್ಲರೂ ತಿಳಿದು ಕೊಂಡಂತೆ ಆಕೆ ಅಳುತ್ತಿದ್ದುದು ಬಾಳುಕುನ ಕಾರಣದಿಂದಲ್ಲ ಎಂದು ತಿಳಿದಾಗ ಕೆಲಸಗಾರರಿಗೆ ತುಸು ನಿರಾಳವಾಗುತ್ತದೆ. ತಮ್ಮ ಸಾಹುಕಾರ ಬಹೂರೂಪಿ ವೃದ್ಧನೊಬ್ಬನ ಜೊತೆ ಕುಡಿಯುತ್ತಾ ಹರಟೆ ಹೊಡೆಯುತ್ತಿದ್ದು ಅವರೂ ಸೀತೆಯ ಜೋರಾದ ಧ್ವನಿ ಕೇಳಿ ಓಡಿಬಂದಿರುತ್ತಾರೆ. ಆದದ್ದೇನೆಂದರೇ ಸೀತೆಗೆ ಆ ಕತ್ತಲ ಕೋಣೆಯಲ್ಲಿ ಕರಿಚೇಳು ಕಡಿದಿತ್ತು. ಬಾಳುಕ ಹತ್ತಿರದ ನಾಟಿ ವೈದ್ಯರನ್ನು ಕರೆದು ಉಪಚಾರ ಮಾಡಿಸುತ್ತಾರೆ. ಆಗ ಸೀತೆಗೆ ತುಸು ನೆಮ್ಮದಿ ಅನಿಸುತ್ತದೆ. ತಾನು ಅವಳಿಗೆ ಉಪಚಾರ ಮಾಡಿದ್ದಕ್ಕೆ ಅವಳಲ್ಲಿ ತನ್ನ ಪರ ಸಹಾನೂಭೂತಿ ಮೂಡಿರಬಹುದೆಂದು ಬಾಳುಕ ಒಳಗೊಳಗೆ ಖುಷಿಪಡುತ್ತಾನೆ. ಸೀತೆ ಕೋಣೆಯಲ್ಲಿ ಮಲಗುವುದು ಬಿಟ್ಟು ಎಲ್ಲರ ಜೊತೆ ಪಡಸಾಲೆಯಲ್ಲಿ ಮಲಗಿದ್ದನ್ನು ಕಂಡು ಅವನಿಗೆ ಕಸಿವಿಸಿ ಆಗುತ್ತದೆ. ತನ್ನ ಯೋಜನೆ ವಿಫಲವಾಗುತ್ತಿದೆಯೆಂದು ಅವನಿಗೆ ಹಳಹಳಿಯಾಗುತ್ತದೆ. ಮಲಗಿದ್ದವರಲ್ಲಿ ಸೀತೆ ಯಾರೆಂದು ತಿಳಿಯಲು ಆತ ಪರದಾಡುತ್ತಾನೆ. ಎಲ್ಲರೂ ಒಂದೇ ತರಹ ಇದ್ದಾರಲ್ಲ, ಇವರಲ್ಲಿ ಸೀತೆ ಯಾರು ಎಂದು ಅವನಿಗೆ ಗೋಜಲು ಗೋಜಲಾಗುತ್ತದೆ. ಎಲ್ಲರೂ ಗಂಡಸರ ಹಾಗೆ ಕಂಡು ಬಾಳುಕುನ ತಲೆ ತಿರುಗಿದಂತಾಯಿತು. ಕೊನೆಗೂ ಬಾಳುಕ ಕಷ್ಟಪಟ್ಟು ಅವಳನ್ನು ಹುಡುಕಿದಾಗ ಆತ ಬೇಸ್ತು ಬೀಳುವುದನ್ನು ಲೇಖಕರು ತುಂಬ ವಿನೋದಮಯವಾಗಿ ಚಿತ್ರಿಸಿರುವುದು ಇಲ್ಲಿ ಮೆಚ್ಚುಗೆಯಾಗುತ್ತದೆ. ಈ ಕಥೆ ಒಂದು ರೀತಿಯಲ್ಲಿ ಮನುಷ್ಯನನ್ನು ಕಾಡುವ ಮಾಯೆಯಂತೆ ಅನಿಸುತ್ತದೆ. ಮಾಯೆ ನಮ್ಮೆಲ್ಲರನ್ನೂ ಆವರಿಸಿಕೊಂಡಿರುವ ಬಗೆಯನ್ನು ಬಾಳುಕನ ವ್ಯಕ್ತಿತ್ವದ ಮೂಲಕ ಕತೆಗಾರರು ಕಟ್ಟಿಕೊಡಲು ಯತ್ನಿಸಿದ್ದಾರೆ. ಬಾಗಲಕೋಟೆ ಬಿಜಾಪುರ ಸೀಮೆಯ ಆಡುಭಾಷೆಯ ಶಬ್ದ, ನುಡಿಗಟ್ಟುಗಳು ಕಥೆಯನ್ನು ಹೃದ್ಯವಾಗಿಸುತ್ತವೆ. 'ಬಾಕಿ ಬಿರಾಡ ತುಂಬಿ ಖುಲ್ಲಾ ಆದಾ', 'ಹಸಿದು ಎಲ್ಲರ ಕಣ್ಣಲ್ಲಿ ಚಿಕ್ಕಿ ಮೂಡಿದ್ದವು', 'ತಡಾಕಿಲ್ಲದ ಸಂಜೀ ಆತು', "ಹೀಂಗ್ಯಾಕ ಮೈಮ್ಯಾಲ ಹಾಂವ ಏರಿದಾಂಗ ಮಾಡಾಕ ಹತ್ತೀರಿ?' ಮುಂತಾದ ಆಡುಮಾತಿನ ವಾಕ್ಯಗಳು ಕತೆಯ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತವೆ. ಅನೇಕ ನುಡಿಗಟ್ಟುಗಳು ನಮ್ಮನ್ನು ಕಳೆದುಹೋಗುತ್ತಿರುವ ಶಬ್ದ ಸಂಪತ್ತಿನ ಜೊತೆ ಜೋಡಿಸುತ್ತವೆ.

'ಸದ್ಯಕ್ಕಿದು ಜಮಖಂಡಿ ಸಂತಿ' ಎನ್ನುವ ಕತೆ ಮಲ್ಲಪ್ಪ ಹೆಸರಿನ ಮಾಸ್ತರರ ಪ್ರಾಮಾಣಿಕತೆಯನ್ನು ನಿರೂಪಿಸುತ್ತದೆ. ಮಾಸ್ತರರು ತಮ್ಮ ಶಿಸ್ತು, ಸಂಯಮ, ಪ್ರಾಮಾಣಿಕತೆ, ಹಾಗೂ ಕರ್ತವ್ಯಪರತೆಗೆ ಹೆಸರಾದವರು. ಮುದುಕಿಯೊಬ್ಬಳು ತನ್ನ ಬಂಗಾರದ ಒಡವೆಗಳನ್ನು ಆಸೆಬುರುಕರಿಂದ ರಕ್ಷಿಸಿಕೊಳ್ಳಲು ಮಲ್ಲಪ್ಪ ಮಾಸ್ತರರ ಬಳಿ ಇಟ್ಟು ಆಮೇಲೆ ತೆಗೆದುಕೊಳ್ಳುತ್ತೇನೆ ಎಂದು ಹೋಗುತ್ತಾಳೆ. ಸ್ವಲ್ಪ ದಿನಗಳಲ್ಲಿಯೆ ಮಾಸ್ತರರಿಗೆ ವರ್ಗವಾಗುತ್ತದೆ. ಎಷ್ಟೋ ವರ್ಷಗಳಾದ ಮೇಲೆ ಮಲ್ಲಪ್ಪ ಮಾಸ್ತರರು, ಅವಳ ದಾಗೀನುಗಳನ್ನು ಗುಲಗಂಜಿಯಷ್ಟು ಕಡಿಮೆ ಮಾಡದೆ ಮರಳಿಸುವುದು ಕಥೆಯ ವಸ್ತುವಾಗಿದೆ. ಮಾಸ್ತರರ ಜೀವನ ಜಂಜಾಟ, ಮಕ್ಕಳು-ಸೊಸೆಯರೊಂದಿಗಿನ ಘರ್ಷಣೆ, ಬಹುಶ: ಪ್ರತಿಯೊಬ್ಬರ ಮನೆಯಲ್ಲಿ ಇರಬಹುದಾದ ರಂಪಾಟ ಮುಂತಾದವುಗಳನ್ನು ವಿನೋದಮಯವಾಗಿ ಕಟ್ಟಿಕೊಡಲು ಪ್ರಕಾಶ ಖಾಡೆಯವರು ಯತ್ನಿಸಿರುವುದು ಈ ಕತೆಯಲ್ಲಿ ಮೆಚ್ಚತಕ್ಕ ಅಂಶವಾಗಿದೆ. ಒಂದು ದಿನ ಮಾಸ್ತರರ ಮನೆಗೆ ಮುದುಕಿ ಅಚಾನಕ್ಕಾಗಿ ಬರುವುದರೊಂದಿಗೆ, ಅವಳನ್ನು ಕಂಡು ವೃದ್ಧರಾಗಿರುವ ಮಾಸ್ತರರು ಮೂರ್ಛ ಬೀಳುವುದರೊಂದಿಗೆ ಕತೆಯನ್ನು ಕುತೂಹಲಕರವಾಗಿ ಪ್ರಕಾಶ ಅವರು ಆರಂಭಿಸಿದ್ದಾರೆ. ಮಾಸ್ತರರ ಜಂಜಾಟಗಳು ಮಕ್ಕಳ ಸೊಸೆಯಂದಿರ ಜಗಳಾಟ,ರಂಪಾಟ ಮುಂತಾದವುಗಳನ್ನು ವಿನೋದಮಯವಾಗಿ ಕಟ್ಟಿಕೊಡಲು ಪ್ರಕಾಶ ಖಾಡೆ ಪ್ರಯತ್ನಿಸಿದ್ದಾರೆ.

ಶಾಲೆಯ ಪರಿಸರವನ್ನು ಇಟ್ಟುಕೊಂಡು ಪರಂಪರಾಗತ ಕಲೆಗಳ ಮೂಲಕ ನಮ್ ಅರಿವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕೆನ್ನುವ ಆಶಯವನ್ನು “ಇಲ್ಲಿಂದ ಮೇಲೆ ಶಬ್ದವಿಲ್ಲ ಕತೆಯಲ್ಲಿ ಮುನ್ನೆಲೆಗೆ ತರಲಾಗಿದೆ. ಕ್ರಿಯಾಶೀಲ ಶಿಕ್ಷಕನೊಂದಿಗೆ ಜಡತ್ವವನ್ನೇ ಹಾಸಿ ಹೊದ್ದುಕೊಳ್ಳುವ ಶಿಕ್ಷಕನೊಬ್ಬನನ್ನು ಕತೆಗಾರರು ಹೋಲಿಕೆ ಮಾಡುತ್ತಾರೆ. ಆ ಮೂಲಕ ಇಲ್ಲಿ ಎರಡು ಭಿನ್ನ ವ್ಯಕ್ತಿತ್ವಗಳ ಅನಾವರಣ ಏರ್ಪಡುತ್ತದೆ. ಹಾಡು, ಕುಣಿತ, ಮೋಜು, ಮೌನಗಳಿಗೆ ವಿಮುಖರಾಗಿರುವ ಒಬ್ಬ ಶಿಕ್ಷಕ ಹಾಗೂ ಅವುಗಳ ಮೂಲಕವೆ ಹೊಸ ಅರ್ಥಗಳನ್ನು ಹುಟ್ಟು ಹಾಕುವ ಶಿಕ್ಷಕರೊಬ್ಬರನ್ನು ಮುಖಾಮುಖಿಯಾಗಿಸುವ ಪ್ರಯತ್ನ ಈ ಕತೆಯಲ್ಲಿದೆ. ಬಯಲಾಟ, ಸಣ್ಣಾಟ ಹಾಗೂ ಜಾನಪದ ಪರಿಸರದ ಕೆಲವು ನುಡಿಗಟ್ಟು ಹಾಗೂ ನಾದಮಯ ವಾಕ್ಯಗಳು ಈ ಕತೆಯನ್ನು ಅಪರೂಪವಾಗಿಸುತ್ತವೆ. ಶಾಲಾ ಪರಿಸರದ ವಸ್ತುವನ್ನೆ ಇಟ್ಟುಕೊಂಡು ಬರೆದಿರುವ ಇನ್ನೊಂದು ಕತೆ 'ಅಕ್ಕರ ತಾಯವ್ವ'. ಇದರಲ್ಲಿ ಆಕಾಶ ಎನ್ನುವ ಆದರ್ಶ ಶಿಕ್ಷಕನೊಬ್ಬ ಊರಲ್ಲಿ ತರುವ ಪರಿವರ್ತನೆಯನ್ನು ಹೃದ್ಯವಾಗಿ ನಿರೂಪಿಸಲಾಗಿದೆ. ಗುಟಕಾ ತಿಂದವರು ಮುದುಕರು ಆಗೋದಿಲ್ಲ' ಎಂಬ ಹೊಸ ಮಾಸ್ತರನ ಮಾತು ಮೊದಲಿಗೆ ಹಳ್ಳಿಗರಿಗೆ ಮಜಾ ಅನ್ನಿಸುತ್ತದೆ. ಆದರೆ ಯಾವಾಗ ಆತ 'ಅವರು ಯಾಕ ಮುದುಕರು ಆಗಂಗಿಲ್ಲಂದ್ರ ಅವರು ಬಾಳ ದಿನ ಬದುಕಾಂಗಿಲ್ಲ... ಇನ್ನೂ ಹರೇದವರು ಇದ್ದಾಗನ ಸತ್ತು ಹೋಗ್ತಾರ' ಎನ್ನುವ ಮಾತನ್ನು ಆಡಿದಾಗ ದುಶ್ಚಟಗಳ ದೂರ ಪರಿಣಾಮಗಳನ್ನು ವಿದ್ಯಾರ್ಥಿಗಳು ಹಾಗೂ ಊರಜನರು ತಿಳಿದುಕೊಳ್ಳುತ್ತಾರೆ. ಇಚ್ಛಾಶಕ್ತಿಯಿದ್ದವರು ಏನೂ ಬೇಕಾದರೂ ಸಾಧಿಸಬಲ್ಲರು ಎಂಬುದನ್ನು ಈ ಕತೆಯಲ್ಲಿ ಆಕಾಶ ಎಂಬ ತರುಣ ಶಿಕ್ಷಕನ ಮೂಲಕ ತೋರಿಸಲಾಗಿದೆ.

'ಬೀಜ ನಿರಾಳದ ಬೆಳಸು' ಕತೆಯಲ್ಲಿ ಬಾಲ್ಯದಲ್ಲಿ ಪೋಲಿಯೋಕ್ಕೆ ತುತ್ತಾಗಿ ಸರಿಯಾಗಿ ಬೆಳವಣಿಗೆ ಕಾಣದ ಬಾಲಕನಲ್ಲಿ ಉತ್ತೇಜನ ತುಂಬಿ ಅವನನ್ನು ಹೊಸ ಬೆಳಕಿನೆಡೆಗೆ ಸಾಗಿಸುವ ಪ್ರಯತ್ನವಿದೆ. ವಿಶೇಷ ಚೇತನದ ಮಕ್ಕಳನ್ನು ಅಕ್ಕರೆ, ಪ್ರೀತಿಗಳಿಂದ ನೋಡಿಕೊಳ್ಳಬೇಕೆನ್ನುವ ಮನಸ್ಸನ್ನು ಮನುಷ್ಯರಾದವರು ಹೊಂದಿರಬೇಕು ಎಂಬ ಆಶಯ ಈ ಕತೆಯಲ್ಲಿ ಅಚ್ಚುಕಟ್ಟಾಗಿ ನಿರೂಪಿತವಾಗಿದೆ. ಅಂತಹ ಮಕ್ಕಳ ಬಗ್ಗೆ ಮನೆಯಲ್ಲಿ ತಾರತಮ್ಯ ತೋರದೆ, ಅವರಲ್ಲಿ ಕೀಳರಿಮೆ ಹುಟ್ಟುಹಾಕದೆ ಸರಿಯಾದ ಪೋಷಣೆ ಮಾಡಬೇಕೆಂಬ ಸಾರ ಇಲ್ಲಿ ಮಡುಗಟ್ಟಿದೆ. ದೈಹಿಕ ಕಸರತ್ತಿನ ಗ್ರಾಮೀಣ ಆಟವೊಂದರ ಮೂಲಕವೆ ಏಳನೆಯ ಇಯತ್ತೆಯ ವಿದ್ಯಾರ್ಥಿಗಳು ನಡೆಯಲು ಬಾರದ ಪುಟ್ಟನನ್ನು ಶಾಲೆಗೆ ತಮ್ಮ ಅಂತ:ಕರಣದ ತೋಳುಗಳಲ್ಲಿ ತರುವುದು ಸಾಮರಸ್ಯ ಹಾಗೂ ಸಮಾನತೆಯ ಸಂಕೇತವಾಗಿ ಕಾಣಿಸಿಕೊಳ್ಳುತ್ತದೆ.

'ವಾಸ್ತವ ನೆಲೆಗಟ್ಟಿನ ಇವರ ಕತೆಗಳಲ್ಲಿ ಭಾಷೆಯ ಚೆಲುವು ಎದ್ದು ಕಾಣುವಂತಹದು. ಜೊತೆಗೆ ವಿನೋದ ಪ್ರವೃತ್ತಿ ಅಲ್ಲಲ್ಲಿ ಇಣುಕುವುದು ಅವರ ಬರವಣಿಗೆಯನ್ನು ಗಮನಿಸುವಂತೆ ಮಾಡುತ್ತದೆ. 'ಒಪ್ಪಾರಿ ಮೀಸಿ' ಇಂಥ ವಿನೋದ ಕಥೆಗಳಲ್ಲೊಂದು.ಇಲ್ಲಿ ಮಿಲ್ಪಿ ಮಧುಮಗ ತನ್ನ ಒಪ್ಪಾರಿ ಮೀಸೆ ಕಳಕೊಂಡು ಮದುವೆ ಸಂದರ್ಭದಲ್ಲಿ ಅನುಭವಿಸುವ ಹಲವು ತೊಳಲಾಟಗಳನ್ನು ಕಥೆಗಾರ ಖಾಡೆ ಅವರು ತುಂಬಾ ನವಿರಾಗಿ ಕಟ್ಟಿಕೊಡುತ್ತಾರೆ. 'ಬುದ್ಧ ಪ್ರಿಯೆ ಶಾಂತಿ' ಕಥೆಯು ಸಂಕಲದ ಗಮನಾರ್ಹ ಕಥೆ, ಬಾದಾಮಿ ಮಹಾಕೂಟ ಬೆಟ್ಟದ ಮರವೊಂದರ ಸುತ್ತ ಸುತ್ತುವ ಕಥೆ ಹಲವು ರೋಮಾಂಚನಗಳಿಗೆ ಸಾಕ್ಷಿಯಾಗುತ್ತದೆ. ಇಲ್ಲಿನ ಕಲ್ಪಿತ ಹೊನ್ನಕುಸುಮ ಮರ ಬಹಳ ಕಾಡುತ್ತದೆ. ಇಲ್ಲಿ ಮೋಡಿಯಾಟದವರ ಚಿತ್ರಣ, ದನಗಳು ಒಂದಕ್ಕೊಂದು ಹಾಯ್ದುಕೊಳ್ಳುವ ಚಿತ್ರಣ, ಜೇನು ಎದ್ದು ಹದಿಹರೆಯದ ಮಕ್ಕಳು ಅನುಭವಿಸುವ ಗೋಳಾಟ ಕಥೆಯನ್ನು ಓದಿಯೇ ಅನುಭವಿಸಬೇಕು.

ಕೃಷ್ಣಾ ತೀರ ಪ್ರದೇಶದ ಕಥೆಗಾರರಾಗಿದ್ದ ದು.ನಿಂ.ಬೆಳಗಲಿ, ರಾವಬಹಾದ್ದೂರ, ಸತ್ಯಕಾಮ ಮುಂತಾದ ಲೇಖಕರು ಕಟ್ಟಿಕೊಟ್ಟ ಪಾರಂಪರಿಕ ಲೋಕದ ಮರುದರ್ಶನ ಹಾಗೂ ಕಳೆದುಹೋದ ಕಾಲವನ್ನು ವರ್ತಮಾನಕ್ಕೆ ಜೋಡಿಸುವ ಪ್ರಯತ್ನವೊಂದನ್ನು ಪ್ರಕಾಶ ಖಾಡೆಯವರು ತಮ್ಮ ಕತೆಗಳ ಮೂಲಕ ಇಲ್ಲಿ ಮುಂದುವರೆಸಿದ್ದಾರೆ. ಸನ್ನಿವೇಶ, ಪಾತ್ರಗಳು, ಇಲ್ಲಿನ ಭಾಷಿಕ ಸೌಂದಯ್ಯ ಈ ಮಾತಿಗೆ ಸಾಕ್ಷಿ ಒದಗಿಸುತ್ತವೆ. ಅಲ್ಲದೆ ಜಾನಪದ ಪರಂಪರೆಯ ಅನೇಕ ವಸ್ತು ಸಂಗತಿಗಳು ಕಥೆಗಳಲ್ಲಿ ದಟ್ಟವಾಗಿ ಹೆಪ್ಪುಗಟ್ಟಿವೆ. ಹಳ್ಳಿ ಪರಿಸರದ ಒಡನಾಡಿಗಳಾದ ಬಹಿರೂಪಗಾರರು, ಮೋಡಿಯಾಟದವರು, ದುರಗಮುರಗಿಯವರು, ಆಯಗಾರರು ಮೊದಲಾದ ಸಕಲ ಜನಪದರು ಕಥೆಗಳಲ್ಲಿ ತೂರಿಕೊಳ್ಳುತ್ತಾರೆ.

ಇಲ್ಲಿನ ಕಥೆಗಳ ಪಾತ್ರಗಳ ಹೆಸರೂ ಮೋಹಕವಾಗಿವೆ, ಕಥೆಯ ಓದಿಗೆ ಕುತೂಹಲ ಹುಟ್ಟಿಸುತ್ತವೆ. ಜಮಖಂಡಿ ಸುತ್ತಿನ ಹಳ್ಳಿಗಳಲ್ಲಿ ಬಾಳಕೃಷ್ಣನನ್ನು ಇವತ್ತಿಗೂ ಬಾಳುಕು ಎಂದು ಕರೆಯುತ್ತಾರೆ. ಇಲ್ಲಿನ ಬಾಳುಕುನ ಪುರಾಣ ಒಂದು ರೀತಿಯಲ್ಲಿ ಕೃಷ್ಣನ ಪುರಾಣವೇ ಆಗಿದೆ. ಬೇರೆ ಬೇರೆ ಕಥೆಗಳಲ್ಲಿ ಕಾಣಿಸಿಕೊಳ್ಳುವ ಸುಕುಮಾರ, ಚಿನ್ನದಾಸಿ, ಶಾಂತಿ, ಸಿರಿವಂತೆ, ಭಾಗೀರಥಿ ಪಾತ್ರಗಳು ಬಹುಕಾಲ ನೆನಪಿನಲ್ಲುಳಿಯುತ್ತವೆ. ಲೀಲಾಜಾಲವಾಗಿ ಓದಿಸಿಕೊಂಡು ಹೋಗುವ ಕಥೆಗಳು ಕುತೂಹಲದಿಂದ ಕೂಡಿವೆ. ಗ್ರಾಮ್ಯ ಭಾಷಾ ಸೊಗಸು ಕಥೆಗಳ ಒಟ್ಟು ಆಕರ್ಷಣೆಗೆ ಜೊತೆಯಾಗಿದೆ. ಒಟ್ಟಾರೆ ಬಾಳುಕುನ ಪುರಾಣ ಸಂಕಲನದ ಕಥೆಗಾರ ಡಾ.ಪ್ರಕಾಶ ಖಾಡೆ ಅವರಿಗೆ ಎಲ್ಲ ಯಶಸ್ಸು ಕೋರುತ್ತೇನೆ.

Shivaratri -Dr.Prakash Khade

 ಶಿವರಾತ್ರಿ ವಿಶೇಷ ಲೇಖನ   : ಜನಪದರ ಹಾಡುಗಳಲ್ಲಿ ಶಿವರಾತ್ರಿ :  -ಡಾ.ಪ್ರಕಾಶ ಗ. ಖಾಡೆ,    ಬಾಗಲಕೋಟ ಮೊ. 9845500890    ಭಾರತೀಯ ಸಂಸ್ಕøತಿಯ ಬೇರುಗಳು ನಮ್ಮ ಜನಪದರ...